ಅಮಿತಾಭ್​ ಬಚ್ಚನ್‌ ನನ್ನ ಪಾತ್ರ ಮೆಚ್ಚಿದ್ದರು, ಅದೇ ನನಗೆ ದೊಡ್ಡ ಪ್ರಶಸ್ತಿ; ವೈಜನಾಥ್ ಬಿರಾದಾರ್

| Updated By: ರಾಜೇಶ್ ದುಗ್ಗುಮನೆ

Updated on: Aug 18, 2021 | 10:28 PM

ಗಿರೀಶ್​ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಸಿನಿಮಾದಲ್ಲಿ ಗಂಭೀರ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ವೈಜನಾಥ್​ ನಟನೆ ನೋಡಿ ಅಮಿತಾಭ್​ ಹೊಗಳಿದ್ದರು ಅನ್ನೋದು ವಿಶೇಷ.

ವೈಜನಾಥ್ ಬಿರಾದಾರ್ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕನ್ನಡದಲ್ಲಿ ಅವರು ಸಾಕಷ್ಟು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಗಿರೀಶ್​ ಕಾಸರವಳ್ಳಿ ನಿರ್ದೇಶನದ ‘ಕನಸೆಂಬ ಕುದುರೆಯನ್ನೇರಿ’ ಸಿನಿಮಾದಲ್ಲಿ ಗಂಭೀರ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ವೈಜನಾಥ್​ ನಟನೆ ನೋಡಿ ಅಮಿತಾಭ್​ ಹೊಗಳಿದ್ದರು ಅನ್ನೋದು ವಿಶೇಷ.

‘ಗಿರೀಶ್​ ಕಾಸರವಳ್ಳಿ ಅವರು ನನಗೆ ಒಂದು ಗಂಭೀರ ಪಾತ್ರ ಕೊಟ್ಟರು. ಆರಂಭದಲ್ಲಿ ನನಗೆ ಭಯ ಆಯ್ತು. ಹಾಸ್ಯ ಪಾತ್ರ ಮಾಡುತ್ತಿದ್ದವನಿಗೆ ಗಂಭೀರ ಪಾತ್ರ ಮಾಡೋದು ಹೇಗೆ ಎಂದು ಅನಿಸಿತ್ತು. ನಾನು ಹೇಳಿದ್ದನ್ನು ಮಾಡಿ ಅಷ್ಟೇ ಸಾಕು ಎಂದಿದ್ದರು ಗಿರೀಶ್​ ಕಾಸರವಳ್ಳಿ. ಗಂಭೀರ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದೆ. ಈ ಪಾತ್ರವನ್ನು ಅಮಿತಾಭ್ ಹೊಗಳಿದ್ದರು’ ಎಂದಿದ್ದಾರೆ ವೈಜನಾಥ್​.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಮನೆ ಹಾಗೂ ಮುಂಬೈನ 3 ರೈಲ್ವೇ ನಿಲ್ದಾಣಗಳಲ್ಲಿ ಬಾಂಬ್​ ಇರಿಸಿರುವುದಾಗಿ ಪೊಲೀಸರಿಗೆ ಕರೆ ಮಾಡಿದ ಅನಾಮಿಕ

 

Published On - 9:53 pm, Wed, 18 August 21

Follow us on