AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

Lakkundi Gold Treasure: ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Feb 04, 2026 | 3:01 PM

Share

ಈ ಭಾಗದಲ್ಲಿ ಹಿಂದೆ ಸುಮಾರು ಏಳು ಜೈನ ಬಸದಿಗಳ ಸಂಕೀರ್ಣ ಇತ್ತು. ಅದರಲ್ಲಿ ಮೂರು ಮಾತ್ರ ಉಳಿದಿದ್ದು, ನಾಲ್ಕು ಸಂಪೂರ್ಣ ಹಾಳಾಗಿವೆ. ಇಲ್ಲಿ ಜೈನ ತೀರ್ಥಂಕರರ ಸ್ಥಾಪನೆಗೆ ಬಳಸುತ್ತಿದ್ದ ಪೀಠದ ಕುರುಹೂ ಇದೆ. ಈ ಪ್ರದೇಶದಲ್ಲಿ ಸರ್ಪಗಳು ಇರುವುದು ಸಾಮಾನ್ಯವಾಗಿದ್ದು, ಅವು ನಿಧಿಯನ್ನು ಕಾಯುತ್ತವೆ ಎಂಬುದು ಲಕ್ಕುಂಡಿಯ ಗ್ರಾಮಸ್ಥರ ನಂಬಿಕೆ. ಈಗಾಗಲೇ ಚಿನ್ನದ ನಿಧಿ, ಹವಳ, ಮುತ್ತುರತ್ನಗಳು ಪತ್ತೆಯಾಗಿವೆ. ಟಂಕಸಾಲೆ ಇದ್ದುದರಿಂದ ಲಕ್ಕುಂಡಿಯ ಗಲ್ಲಿ ಗಲ್ಲಿಯಲ್ಲಿಯೂ ಚಿನ್ನ ಸಿಗಬಹುದು ಎಂಬ ಇತಿಹಾಸ ತಜ್ಞರ ಮಾತು ಈ ನಂಬಿಕೆಗೆ ಪುಷ್ಠಿ ನೀಡಿದೆ.

ಗದಗ, ಫೆಬ್ರುವರಿ 04: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಅಡಗಿರುವ ನಿಧಿ ಮತ್ತು ಅದನ್ನು ಸರ್ಪಗಳು ಕಾಯುತ್ತವೆ ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಲಕ್ಕುಂಡಿ ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ ಯಾವಗಲ್ ಅವರು ಟಿವಿ9ಗೆ ನೀಡಿರುವ ಹೇಳಿಕೆಯ ಪ್ರಕಾರ, ಇಲ್ಲಿನ ಜೈನ ಬಸದಿಗಳ ಭಾಗದಲ್ಲಿ ಸಾಕಷ್ಟು ಸರ್ಪಗಳಿದ್ದು, ಅವು ನಿಧಿಗೆ ಕಾವಲು ಕಾಯುತ್ತವೆ. ಪ್ರಸ್ತುತ ನಾಗನಾಥ ದೇವಾಲಯ ಎಂದು ಗುರುತಿಸಲಾಗುವ ಸ್ಥಳ ಮೂಲತಃ ಜೈನ ಬಸದಿ ಎಂಬುದಕ್ಕೆ ಹಲವು ಕುರುಹುಗಳು ದೊರೆತಿವೆ.

ಈ ಭಾಗದಲ್ಲಿ ಹಿಂದೆ ಸುಮಾರು ಏಳು ಜೈನ ಬಸದಿಗಳ ಸಂಕೀರ್ಣ ಇತ್ತು. ಅದರಲ್ಲಿ ಮೂರು ಮಾತ್ರ ಉಳಿದಿದ್ದು, ನಾಲ್ಕು ಸಂಪೂರ್ಣ ಹಾಳಾಗಿವೆ. ಇಲ್ಲಿ ಜೈನ ತೀರ್ಥಂಕರರ ಸ್ಥಾಪನೆಗೆ ಬಳಸುತ್ತಿದ್ದ ಪೀಠದ ಕುರುಹೂ ಇದೆ. ಈ ಪ್ರದೇಶದಲ್ಲಿ ಸರ್ಪಗಳು ಇರುವುದು ಸಾಮಾನ್ಯವಾಗಿದ್ದು, ಅವು ನಿಧಿಯನ್ನು ಕಾಯುತ್ತವೆ ಎಂಬುದು ಲಕ್ಕುಂಡಿಯ ಗ್ರಾಮಸ್ಥರ ನಂಬಿಕೆ. ಈಗಾಗಲೇ ಚಿನ್ನದ ನಿಧಿ, ಹವಳ, ಮುತ್ತುರತ್ನಗಳು ಪತ್ತೆಯಾಗಿವೆ. ಟಂಕಸಾಲೆ ಇದ್ದುದರಿಂದ ಲಕ್ಕುಂಡಿಯ ಗಲ್ಲಿ ಗಲ್ಲಿಯಲ್ಲಿಯೂ ಚಿನ್ನ ಸಿಗಬಹುದು ಎಂಬ ಇತಿಹಾಸ ತಜ್ಞರ ಮಾತು ಈ ನಂಬಿಕೆಗೆ ಪುಷ್ಠಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.