Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಆಗಿ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್

ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಆಗಿ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್

Malatesh Jaggin
| Updated By: ಮದನ್​ ಕುಮಾರ್​

Updated on:Mar 12, 2025 | 9:44 PM

ಪುನೀತ್ ರಾಜ್​ಕುಮಾರ್​ ನಟನೆಯ ‘ಅಪ್ಪು’ ಸಿನಿಮಾ ಮಾರ್ಚ್​ 14ರಂದು ಮರುಬಿಡುಗಡೆ ಆಗುತ್ತಿದೆ. ಈ ಸಿನಿಮಾದ ‘ಆ ದೇವರ ಹಾಡಿದು..’ ಹಾಗೂ ‘ಎಲ್ಲಿಂದ ಆರಂಭವೋ..’ ಹಾಡುಗಳನ್ನು ಬರೆದ ಕೆ. ಕಲ್ಯಾಣ್ ಅವರು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರ ಒಡನಾಟವನ್ನು ಕಲ್ಯಾಣ್ ಅವರು ನೆನಪು ಮಾಡಿಕೊಂಡಿದ್ದಾರೆ.

‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗುತ್ತಿರುವ ಸಮಯದಲ್ಲಿ ಗೀತರಚನಕಾರ ಕೆ. ಕಲ್ಯಾಣ್ ಅವರು ಪುನೀತ್ ರಾಜ್​ಕುಮಾರ್​ (Puneeth Rajkumar) ಬಗ್ಗೆ ಮಾತನಾಡಿದ್ದಾರೆ. ‘ಪುನೀತ್ ರಾಜ್​ಕುಮಾರ್​ ಅವರದ್ದು ಆದರ್ಶ ವ್ಯಕ್ತಿತ್ವ. ಯಾರ ಬಗ್ಗೆಯೂ ಅವರು ನೆಗೆಟಿವ್ ಆಗಿ ಮಾತನಾಡಿದ್ದನ್ನು ನಾನು ಕೇಳಿಯೇ ಇಲ್ಲ. ಯಾವ ಗಾಸಿಪ್​ಗಳು, ಕೆಟ್ಟ ಸುದ್ದಿಗಳು ಅವರ ಸುತ್ತ ಸುಳಿಯುತ್ತಲೇ ಇರಲಿಲ್ಲ. ಅಷ್ಟು ಶುದ್ಧವಾದ ಮನಸ್ಸು ಅವರದ್ದು’ ಎಂದು ಕೆ. ಕಲ್ಯಾಣ್ (K Kalyan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 12, 2025 08:25 PM