AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಂದ ದೇವಸ್ಥಾನದ ಮೇಲೆ ಕಲ್ಲೆಸತ, ಏರಿಯಾದಲ್ಲಿ ಬಿಗುವಿನ ವಾತಾವರಣ

ಬೆಳಗಾವಿ ನಗರದಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಂದ ದೇವಸ್ಥಾನದ ಮೇಲೆ ಕಲ್ಲೆಸತ, ಏರಿಯಾದಲ್ಲಿ ಬಿಗುವಿನ ವಾತಾವರಣ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 08, 2025 | 10:46 AM

ಯಾಸೆರ್ ಒಬ್ಬ ಮಾನಸಿಕ ಅಸ್ಚಸ್ಥನೆಂದು ಹೇಳಲಾಗುತ್ತಿದೆ. ಮಾನಸಿಕ ಸ್ವಸ್ಥರು ಸಮಾಜದ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಕದಡುವುದಿಲ್ಲ, ಆ ಪ್ರಶ್ನೆ ಬೇರೆ. ಅದರೆ ಒಬ್ಬನ ದುಷ್ಕೃತ್ಯದಿಂದ ಇಡೀ ಊರಿನ ಮಾನಸಿಕ ಸ್ವಾಸ್ಥ್ಯ ಹಾಳಾಗೋದು ಸರಿಯಲ್ಲ. ಬೆಳಗಾವಿ ಒಂದು ಶಾಂತಿಪ್ರಿಯ ನಗರ ಮತ್ತು ಜಿಲ್ಲೆ. ಬೇರೆ ಕಾರಣಗಳಿಗಾಗಿ ಇಲ್ಲಿ ಗಲಾಟೆಗಳು ನಡೆಯುತ್ತವೆ, ಮತೀಯ ಕಾರಣಗಳಿಗಾಗಿ ಅಲ್ಲ.

ಬೆಳಗಾವಿ, ಏಪ್ರಿಲ್ 8: ಯಾಸೆರ್ ಹೆಸರಿನ ಯುವಕನೊಬ್ಬ ನಗರದ ಪ್ರಾಂಗುಳ ಗಲ್ಲಿಯಲ್ಲಿರುವ ದೇವಸ್ಥಾನವೊಂದರ ಮೇಲೆ ನಿನ್ನೆ ರಾತ್ರಿ ಕಲ್ಲೆಸೆದ ಕಾರಣ ಏರಿಯಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರಿಂದ ಗಲಾಟೆಗಳು ಸಂಭವಿಸಲಿಲ್ಲ. ಏರಿಯಾದಲ್ಲಿರುವ ಅಶ್ವತ್ಥಾಮ ದೇಗುಲದ ಮೇಲೆ ಕಲ್ಲೆಸೆದ ಮಾನಸಿಕ ಅಸ್ವಸ್ಥ ಯಾಸೆರ್​ನನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ ಪ್ರಾಂಗುಳ ಗಲ್ಲಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.

ಇದನ್ನೂ ಓದಿ:  ಮೈಸೂರು: ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ, ಗಲಭೆಗೆ ಪ್ರಚೋದನೆ ನೀಡಿದ ಮೌಲ್ವಿ ಮುಫ್ತಿ ಮುಸ್ತಾಕ್ ಬಂಧನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 08, 2025 10:45 AM