AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಿಂದ ಬಂದಿರುವ ಬಾಲರಾಮನ ಮೂರ್ತಿಯಲ್ಲಿ ಜೀವಕಳೆ ಸೂಸುತ್ತಿದೆ: ನಿರ್ಮಾಲಾನಂದನಾಥ ಶ್ರೀ

ಕರ್ನಾಟಕದಿಂದ ಬಂದಿರುವ ಬಾಲರಾಮನ ಮೂರ್ತಿಯಲ್ಲಿ ಜೀವಕಳೆ ಸೂಸುತ್ತಿದೆ: ನಿರ್ಮಾಲಾನಂದನಾಥ ಶ್ರೀ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Jan 22, 2024 | 7:27 PM

Share

ರಾಮಲಲ್ಲಾನ ವಿಗ್ರಹ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಲಾನಂದನಾಥ ಶ್ರೀಗಳು ಅವರೊಬ್ಬ ಆಸಾಧಾರಣ ಪ್ರತಿಭೆಯ ಶಿಲ್ಪಿ ಎಂದು ಹೇಳಿದರು.

ಅಯೋಧ್ಯೆ: ರಾಮಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ (Ram temple consecration ceremony) ನೆರವೇರಿದ ಬಳಿಕ ಆದಿ ಚುಂಚನಗಿರಿ ಶಾಖಾಮಠದ ನಿರ್ಮಲಾನಂದನಾಥ ಶ್ರೀಗಳು (Nirmalanandanatha Sri) ಅವರು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದರು. ರವಿವಾರವೂ ಟಿವಿ9 ವಾಹಿನಿಯೊಂದಿಗೆ ಮಾತಾಡಿದ್ದ ಅವರು ರಾಮಮಂದಿರ ಸುತ್ತಮುತ್ತಲಿನ ಪ್ರದೇಶವನ್ನು ನೋಡಿರಲಲಿಲ್ಲವಾದ್ದರಿಂದ ಅದರ ಬಗ್ಗೆ ಹೆಚ್ಚು ಹೇಳಿಲಿಲ್ಲ. ಇವತ್ತು ಮಾತಾಡುವಾಗ ಅವರು ನಿನ್ನೆ ಹೇಳಿದನ್ನು ಜ್ಞಾಪಿಸಿಕೊಂಡರು. ಆದರೆ ಇವತ್ತು ಉದ್ಘಾಟನೆ ಸಮಯದಲ್ಲಿ ಮಂದಿರ ಮತ್ತು ಸುತ್ತಮುತ್ತಲಿನ ಪರಿಸರ ವೀಕ್ಷಿಸಿದ್ದ ಅವರು, ತಾವು ಹಿಂದೆಯೂ ಹಲವು ಸಲ ಇಲ್ಲಿಗೆ ಬಂದಿದ್ದು ಆಗಿನ ಮತ್ತು ಈಗಿನ ಮಂದಿರದ ನಡುವೆ ಅಗಾಧವಾದ ವ್ಯತ್ಯಾಸವಿದೆ. ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಗಿದೆ ಎಂದ ಶ್ರೀಗಳು ಕರ್ನಾಟಕದಿಂದ ಬಂದಿರುವ ಬಾಲರಾಮನ ಮೂರ್ತಿಯಲ್ಲಿ ಜೀವಕಳೆ ಸೂಸುತ್ತಿದೆ ಎಂದು ಹೇಳಿದರು. ರಾಮಲಲ್ಲಾನ ವಿಗ್ರಹ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ಮಾಲಾನಂದನಾಥ ಶ್ರೀಗಳು ಅವರೊಬ್ಬ ಆಸಾಧಾರಣ ಪ್ರತಿಭೆಯ ಶಿಲ್ಪಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jan 22, 2024 07:13 PM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.