My India My Life Goals: 42-ವರ್ಷಗಳಿಂದ ಪ್ರತಿದಿನ ಸಸಿ ನೆಡುತ್ತಿರುವ ಅಸ್ಸಾಂನ ಕಾಡು ಜೀವಿ ಜಾಧವ್ ಪೇಯೆಂಗ್ 550-ಹೆಕ್ಟೇರ್ ಅರಣ್ಯ ಸೃಷ್ಟಿಸಿದ್ದಾರೆ!

ಎಲ್ಲ 140 ಕೋಟಿ ಭಾರತೀಯರು, ಪರಿಸರ ಉಳಿಸುವೆಡೆ ಗಮನ ಹರಿಸಿದರೆ ನಮ್ಮ ಬದುಕುಗಳು ಸುಂದರ ಮತ್ತು ಆರೋಗ್ಯಯುಕ್ತವಾಗುತ್ತವೆ ಅಂತ ಕಾಡಿನ ಮನುಷ್ಯ ಜಾದವ್ ಹೇಳುತ್ತಾರೆ.

My India My Life Goals: 42-ವರ್ಷಗಳಿಂದ ಪ್ರತಿದಿನ ಸಸಿ ನೆಡುತ್ತಿರುವ ಅಸ್ಸಾಂನ ಕಾಡು ಜೀವಿ ಜಾಧವ್ ಪೇಯೆಂಗ್ 550-ಹೆಕ್ಟೇರ್ ಅರಣ್ಯ ಸೃಷ್ಟಿಸಿದ್ದಾರೆ!
|

Updated on:Jul 17, 2023 | 2:53 PM

ಬೆಂಗಳೂರು: ಇವರನ್ನು ನೀವು ಬಲ್ಲಿರಾ? ಪರಿಸರದ ಉಳಿವಿಗಾಗಿ ಕಳೆದ 42 ವರ್ಷಗಳಿಂದ ತಮ್ಮ ಜೀವ ತೇಯುತ್ತಿರುವ ಇವರ ಹೆಸರು ಜಾದವ್ ಪೇಯೆಂಗ್ (Jadav Payeng). ಭಾರತದಲ್ಲಿ ಇವರು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯ (The Forest Man of India) (ಭಾರತದ ಕಾಡು ಜೀವಿ) ಅಂತಲೇ ಗುರುತಿಸಿಕೊಳ್ಳುತ್ತಾರೆ. ಈಗ 65-ವರ್ಷ ವಯಸ್ಸಿನವರಾಗಿರುವ ಜಾದವ್ ತಮ್ಮ 16 ನೇ ವಯಸ್ಸಿನಲ್ಲೇ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಕೆಲಸ ಶುರುಮಾಡಿದರು. ಪ್ರತಿದಿನ ಅವರು ಒಂದು ಸಸಿಯನ್ನು ನೆಡುತ್ತಾರೆ. ಅಲ್ಲಿಂದ ಈ ನಾಲ್ಕು ದಶಕಗಳ ಅವಧಿಯಲ್ಲಿ ಅವರು 550-ಹೆಕ್ಟೇರ್ ನಷ್ಟು ವಿಶಾಲವಾದ ಅರಣ್ಯ ಪ್ರದೇಶ (forest area) ಸೃಷ್ಟಿಸಿದ್ದ್ದಾರೆ! ಇವರೊಂದಿಗೆ ಕುಟುಂಬವೂ ಕೈ ಜೋಡಿಸುತ್ತದೆ ಮತ್ತು ಅವರೆಲ್ಲ ಅರಣ್ಯದಲ್ಲೇ ವಾಸವಾಗಿದ್ದಾರೆ. ಪರಿಸರ ಉಳಿವಿಗೆ ನೀಡುತ್ತಿರುವ ಬೃಹತ್ ಕಾಣಿಕೆಯನ್ನು ಪರಿಗಣಿಸಿ ಭಾರತ ಸರ್ಕಾರ ಜಾದವ್ ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲ 140 ಕೋಟಿ ಭಾರತೀಯರು, ಪರಿಸರ ಉಳಿಸುವೆಡೆ ಗಮನ ಹರಿಸಿದರೆ ನಮ್ಮ ಬದುಕುಗಳು ಸುಂದರ ಮತ್ತು ಆರೋಗ್ಯಯುಕ್ತವಾಗುತ್ತವೆ ಅಂತ ಕಾಡಿನ ಮನುಷ್ಯ ಜಾದವ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Mon, 17 July 23

Follow us
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!