ನಾಗಸಂದ್ರ-ಪೀಣ್ಯ ನಡುವೆ ಮೆಟ್ರೋ ಸಂಚಾರ ಬಂದ್, ಸುಲಿಗೆಗಿಳಿದ ಆಟೋರಿಕ್ಷಾ ಚಾಲಕರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2024 | 11:47 AM

ಆಟೋರಿಕ್ಷಾ ಚಾಲಕರ ಧೋರಣೆ ಮತ್ತು ವರ್ತನೆ ಅರ್ಥವಾಗಲ್ಲ, ನಾಗಸಂದ್ರದಿಂದ ಪೀಣ್ಯಗೆ ಮಿನಿಮಮ್ ಫೇರ್ ಆಗುತ್ತಂತೆ ಅದರೆ ಅವರು ₹ 200 ಕೇಳುತ್ತಿದ್ದಾರೆ! ಚೌಕಾಶಿಗೂ ಅವರು ಅವಕಾಶ ಕೊಡಲ್ಲ, ದೋಚುವುದೆಂದರೆ ಈ ಪಾಟಿನಾ? ಬಸ್ಸಲ್ಲಿ ಹೋಗಬೇಕೆಂದರೆ ಸಮಯ ಜಾಸ್ತಿ ಹಿಡಿಯುತ್ತದೆ.

ಬೆಂಗಳೂರು: ನಾಗಸಂದ್ರದಿಂದ ಪಿಣ್ಯ ನಡುವೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ಆಫೀಸು ಮತ್ತು ಬೇರೆ ಬೇರೆ ಕಡೆ ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ. ರೆಗ್ಯುಲರ್ ಅಗಿ ಓಡಾಡುವ ಜನ ತಮ್ಮ ಸಮಸ್ಯೆಯನ್ನು ನಮ್ಮ ವರದಿಗಾರನೊಂದಿಗೆ ತೋಡಿಕೊಂಡಿದ್ದಾರೆ. ಅಟೋರಿಕ್ಷಾ ಚಾಲಕರಿಗೆ ಇದು ಸುಲಿಗೆಯ ಸಮಯ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bengaluru Metro: ಲೋಕಸಭಾ ಚುನಾವಣೆ 2024- ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.