ಬಾಗಲಕೋಟೆಯಲ್ಲಿ ಮೇಳೈಸಿದ ‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು

Edited By:

Updated on: Aug 18, 2026 | 5:42 PM

ಬಾಗಲಕೋಟೆಯಲ್ಲಿ ಕೇರಳಿಗರ ಸಾಂಪ್ರದಾಯಿಕ ಹಬ್ಬ ಓಣಂ ಅದ್ಧೂರಿಯಾಗಿ ಆಚರಿಸಲಾಯಿತು. ಬಸವೇಶ್ವರ ವಿದ್ಯಾ ವರ್ಧಕ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ನೂರಾರು ಕೇರಳ ಮೂಲದ ವಿದ್ಯಾರ್ಥಿನಿಯರು ತಮ್ಮ ತವರೂರಿನ ಸಂಭ್ರಮವನ್ನು ಇಲ್ಲಿ ಪುನರಾವರ್ತಿಸಿದರು. ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಮೋಹಿನಿ ಆಟ್ಟಂ ಮತ್ತು ಚಂಡೆ ಮದ್ದಳೆ ನೃತ್ಯಗಳ ಮೂಲಕ ಹಬ್ಬಕ್ಕೆ ಹೊಸ ಮೆರುಗು ನೀಡಿದರು.

ಬಾಗಲಕೋಟೆ, ಆಗಸ್ಟ್ 18: ಸಾಮಾನ್ಯವಾಗಿ ಕೇರಳದಲ್ಲಿ ಆಚರಿಸುವ ಓಣಂ ಹಬ್ಬವನ್ನು ಬಾಗಲಕೋಟೆಯಲ್ಲಿ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸಲಾಯಿತು. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನಲ್ಲಿ ಕೇರಳಿಗರ ಸುಗ್ಗಿ ಹಬ್ಬ ಓಣಂ ಅನ್ನು ಅತ್ಯಂತ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸುಮಾರು 700ಕ್ಕೂ ಅಧಿಕ ಕೇರಳ ಮೂಲದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಕ್ಯಾಂಪಸ್‌ನಲ್ಲಿ, ಸಾಂಪ್ರದಾಯಿಕ ಉಡುಪು ಲುಂಗಿ-ಪಂಚೆ ಹಾಗೂ ಕೇರಳ ಕಸವು ಸೀರೆಯನ್ನು ತೊಟ್ಟ ಯುವಕ-ಯುವತಿಯರು ಚಂಡೆ-ಮದ್ದಳೆಯ ನಾದಕ್ಕೆ ಲಯಬದ್ಧವಾಗಿ ಹೆಜ್ಜೆ ಹಾಕಿ, ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸುವ ಮೂಲಕ ಕಾಲೇಜು ಆವರಣದಲ್ಲೇ ಮಿನಿ ಕೇರಳದ ವಾತಾವರಣ ಸೃಷ್ಟಿಸಿದರು. ಮಹಾಬಲಿ ಚಕ್ರವರ್ತಿಯ ಸ್ವಾಗತದ ಪೌರಾಣಿಕ ಹಿನ್ನೆಲೆ ಈ ಹಬ್ಬವನ್ನು ವಿದ್ಯಾರ್ಥಿಗಳು ಕನ್ನಡ ನೆಲದಲ್ಲೂ ಸಡಗರದಿಂದ ಆಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us