ಕರ್ನಾಟಕದಲ್ಲಿ ಚುನಾವಣಾ ಭ್ರಷ್ಟಾಚಾರ ಆರಂಭಿಸಿದ್ದು ಬಳ್ಳಾರಿ ರೆಡ್ಡಿಗಳು: ಜೆಟಿ ಪಾಟೀಲ್, ಬೀಳಗಿ ಶಾಸಕ
ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದವರು, ವೋಟು ತಮಗೆ ಹಾಕಿದರೆ ಅವರು (ರೆಡ್ಡಿಗಳು) ಮೊಬೈಲ್ ಫೋನ್ ಮತ್ತು ಹಣ ಕೊಡುವುದಾಗಿ ಹೇಳಿದ್ದಾರೆ, ನೀವೇನು ಕೊಡ್ತೀರಿ ಅಂತ ಅವರು ನಮ್ಮನ್ನು ಕೇಳಿದರು ಎಂದು ಪಾಟೀಲ್ ಹೇಳಿದರು.
ಬಾಗಲಕೋಟೆ: ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿದವರು ಬಳ್ಳಾರಿಯ ರೆಡ್ಡಿಗಳು (Reddy brothers of Ballari), ಅವರಿಂದಾಗೇ ಪ್ರಜಾಪ್ರಭುತ್ವದ ಬಹು ಮುಖ್ಯ ಅಂಗವಾಗಿರುವ ಚುನಾವಣೆಗೆ ಭ್ರಷ್ಟಾಚಾರದ (corruption) ಕಳಂಕ ಸುತ್ತಿಕೊಂಡಿದೆ ಎಂದು ಬೀಳಗಿ ಶಾಸಕ ಜೆಟಿ ಪಾಟೀಲ್ (JT Patil) ಹೇಳಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಬೀಳಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಪಾಟೀಲ್, ಚುನಾವಣಾ ಪ್ರಚಾರಕ್ಕೆಂದು ಕೆಎಂಸಿ ಕ್ಯಾಂಪಸ್ ಹೋದಾಗ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದವರು, ವೋಟು ತಮಗೆ ಹಾಕಿದರೆ ಅವರು (ರೆಡ್ಡಿಗಳು) ಮೊಬೈಲ್ ಫೋನ್ ಮತ್ತು ಹಣ ಕೊಡುವುದಾಗಿ ಹೇಳಿದ್ದಾರೆ, ನೀವೇನು ಕೊಡ್ತೀರಿ ಅಂತ ಅವರು ನಮ್ಮನ್ನು ಕೇಳಿದರು ಎಂದು ಹೇಳಿದರು. ಹಾಗೆ ವೋಟು ಪಡೆದು ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ ಎಂದು ಹೇಳಿದ ಕಾಂಗ್ರೆಸ್ ಶಾಸಕ, ರಾಜಕಾರಣದ ಜೊತೆ ರಾಜಕಾರಣಿಗಳು ಕೂಡ ಕೆಟ್ಟಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರೀಲ್ಸ್ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಬಸ್ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ

