Pahelgam Terrorist Attack: ಪೊಲೀಸ್ ಟ್ರಿಕ್ ಬಳಸಿ ತನ್ನೊಂದಿಗೆ ಬೇರೆಯವರನ್ನೂ ಸಾವಿನಿಂದ ಪಾರು ಮಾಡಿದ ದೊಡ್ಡಬಸಯ್ಯ
ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಸುಮಾರು 1,000 ಜನ ಪಹೆಲ್ಗಾಮ್ನ ಪ್ರಕೃತಿ ಸೊಬಗಿನಲ್ಲಿ ಕಳೆದುಹೋಗಿದ್ದರಂತೆ. ಕೆಲವರು ಸೆಲ್ಫೀ ತೆಗೆದುಕೊಳ್ಳುತ್ತಿದ್ದರೆ ಕೆಲವರು ಡ್ಯಾನ್ಸ್ ಮಾಡುತ್ತಿದ್ದರೆಂದು ದೊಡ್ಡಬಸಯ್ಯ ಹೇಳುತ್ತಾರೆ. ಭಯೋತ್ಪಾದಕರು ಮಿಲಿಟರಿ ಉಡುಗೆ ಧರಿಸಿದ್ದರಿಂದ ಜನರಿಗೆ ಗೊತ್ತಾಗಿಲ್ಲ. ಅವರು ಗುಂಡು ಹಾರಿಸಲಾರಂಭಿಸಿದಾಗ ಜನ ಪಟಾಕಿ ಸುಡುವ ಸದ್ದು ಅಂದುಕೊಂಡಿದ್ದರು ಎಂದು ಅವರು ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 23: ಅಧಿಕೃತ ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಇನ್ನೂ 40 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ. ಏತನ್ಮಧ್ಯೆ, ತಮ್ಮ ವಿವೇಚನೆ ಬಳಸಿ ನಿಶ್ಚಿತ ಸಾವಿನಿಂದ ಬಚಾವಾಗಿ ಬಂದಿರುವ ಬಳ್ಳಾರಿಯ ಕನ್ನಡಿಗ ದೊಡ್ಡಬಸಯ್ಯ ನಮ್ಮ ಚ್ಯಾನೆಲ್ ಜತೆ ಮಾತಾಡಿದ್ದಾರೆ. ದೊಡ್ಡಬಸಯ್ಯ ತಾವು ಮಾತ್ರವಲ್ಲದೆ ತಮ್ಮೊಂದಿಗಿದ್ದ10-20 ಜನರನ್ನು ಸಹ ಸಾವಿನಿಂದ ಪಾರು ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುವ ಅವರು ಮೊದಲು ಪೊಲೀಸ್ ಇಲಾಖೆಯಲ್ಲಿದ್ದರಂತೆ. ಪೊಲೀಸ್ ತರಬೇತಿಯಲ್ಲಿ ಹೇಳಿಕೊಟ್ಟಿದ್ದ ಟ್ರಿಕ್ಕನ್ನೇ ಬಳಸಿ ಅವರು ತಾವು ಸಾವಿನಿಂದ ಪಾರಾಗಿದ್ದಲ್ಲದೆ ಬೇರೆಯವರನ್ನೂ ಕಾಪಾಡಿದ್ದಾರೆ.
ಇದನ್ನೂ ಓದಿ: Pahalgam Attack: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿ; ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ

ಜಾಫರ್ ಎಕ್ಸ್ಪ್ರೆಸ್ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್ಎ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ

ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
