25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್ಗೆ ಹಾರ್ಟ್ ಸಮಸ್ಯೆ ಆಗಿತ್ತು: ಸಾಧು ಕೋಕಿಲ
ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರ ನಿಧನಕ್ಕೆ ಸಾಧು ಕೋಕಿಲ ಅವರು ಕಂಬನಿ ಮಿಡಿದಿದ್ದಾರೆ. ಜನಾರ್ದನ್ ಅವರಿಗೆ ಬಹಳ ವರ್ಷಗಳ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ಅವರು ಹೇಳಿದ್ದಾರೆ. ಇಂದು (ಏಪ್ರಿಲ್ 14) ಅಂತಿಮ ದರ್ಶನ ಪಡೆದ ಬಳಿಕ ಸಾಧು ಕೋಕಿಲ ಅವರು ಈ ವಿಷಯ ಹಂಚಿಕೊಂಡರು.
ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಬ್ಯಾಂಕ್ ಜನಾರ್ದನ್ (Bank Janardhan) ಅವರು ನೂರಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಂದು (ಏ.14) ಬ್ಯಾಂಕ್ ಜನಾರ್ದನ್ ಅಗಲಿಕೆಗೆ ಸಾಧು ಕೋಕಿಲ (Sadhu Kokila) ಕಂಬನಿ ಮಿಡಿದಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ಜನಾರ್ದನ್ ಅವರಿಗಾಗಿ ಚಲನಚಿತ್ರ ಅಕಾಡೆಮಿಯಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿಗೆ ನಾನೇ ಜ್ಯೂರಿ ಆಗಿದ್ದೆ. ಜನಾರ್ದನ್ ಅವರಿಗೆ ಈ ಪ್ರಶಸ್ತಿ ಕೊಡಲೇಬೇಕು ಅಂತ ಹೇಳಿದ್ದೆ. ಯಾಕೆಂದರೆ, ಅವರಿಗೆ ಹಾರ್ಟ್ ಪ್ರಾಬ್ಲಂ ಇದೆ ಅಂತ ಹೇಳಿದ್ದೆ. ಅಂದಾಜು 25 ವರ್ಷಗಳ ಮುಂಚೆಯೇ ಅವರಿಗೆ ಹಾರ್ಟ್ ಪ್ರಾಬ್ಲಂ ಆಗಿತ್ತು. ಅವರ ಋಣ ಈ ಭೂಮಿಗೆ ಇಷ್ಟೇ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಾಧು ಕೋಕಿಲ ಹೇಳಿದ್ದಾರೆ. ಅವರ ಜೊತೆ ಉಪೇಂದ್ರ (Upendra) ಕೂಡ ಅಂತಿಮ ದರ್ಶನ ಪಡೆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ

ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್

ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
