ರೋಡ್ ರೇಜ್ ಪ್ರಕರಣ, ಆರೋಪಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಮೃತನ ಕುಟುಂಬಸ್ಥರ ಆಗ್ರಹ

ಅರುಣ್​ ಕುಮಾರ್​ ಬೆಳ್ಳಿ

Updated on: Aug 31, 2024 | 6:43 PM

ವಿಡಿಯೋದ ಬಲಭಾಗದಲ್ಲಿ ಆರೋಪಿ ರೇಣುಕಾ ಪ್ರಸಾದ್ ನನ್ನು ಪೊಲಿಸರು ಕೊಲೆ ನಡೆದ ಸ್ಥಳದ ಮಹಜರ್ ನಡೆಸಲು ಕರೆತಂದಿರುವುದನ್ನು ನೋಡಬಹುದು. ರೆಹಮಾನ್ ಕುಟುಂಬದವರು ಪ್ರಕರಣದಲ್ಲಿ ಹಿಂದೂ ಮುಸ್ಲಿಂ ಅಂಶವಿಲ್ಲ, ನಮಗೆ ನ್ಯಾಯ ಮಾತ್ರ ಬೇಕು ಅಷ್ಟೇ ಎನ್ನುತ್ತಿದ್ದಾರೆ.

ನೆಲಮಂಗಲ: ಬುಧವಾರ ರಾತ್ರಿ ಬೆಂಗಳೂರು ನಗರದ ಹೊರವಲಯದರಲ್ಲಿ ಕಿರಿದಾದ ರಸ್ತೆಯೊಂದರ ನಡುವೆ ನಡೆದ ಜಗಳದಲ್ಲಿ 18-ವರ್ಷ ವಯಸ್ಸಿನ ಯುವಕ ಮೊಹಮ್ಮದ್ ರೆಹಮಾನ್ ಉಲ್ಲಾಹ್ ನನ್ನು ಚಾಕುವಿನಿಂದ ಇರಿದು ಕೊಂದ ಆರೋಪ ಎದುರಿಸುತ್ತಿರುವ 33 ವರ್ಷದ ರೇಣುಕಾ ಪ್ರಸಾದ್ ಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಮೃತ ರೆಹಮಾನ್ ಕುಟುಂದ ಸದಸ್ಯರು ಇಂದು ನೆಲಮಂಗಲದಲ್ಲಿ ರಸ್ತೆತಡೆದು ಪ್ರತಿಭಟನೆ ನಡೆಸಿದರು. ಬದುಕಿ ಬಾಳಬೇಕಿದ್ದ ಹದಿಹರೆಯದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ ಪ್ರಸಾದ್ ಗೆ ಕಾನೂನು ಯಾವುದೇ ರಿಯಾಯಿತಿ ತೋರಬಾರದು ಎಂದು ಕುಟುಂಬಸ್ಥರು ಮಾಧ್ಯಮದವರಿಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ: ಬಿಎಸ್​​ಪಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ

Published on: Aug 31, 2024 06:38 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.