ಬಾಗಪ್ಪ ಹರಿಜನ್ ಕುಡಿಯುತ್ತಿರಲಿಲ್ಲ ಅದರೆ ಅವನೊಬ್ಬ ಸ್ತ್ರೀಲೋಲನಾಗಿದ್ದ: ರವೀಂದ್ರ, ನಿವೃತ್ತ ಡಿವೈಎಸ್​ಪಿ

ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2025 | 8:53 PM

ಬಾಗಪ್ಪ ಮೇಲೆ 2018ರಲ್ಲಿ ಗುಂಡಿನ ದಾಳಿ ನಡೆದು ಅವನನ್ನು ಚಿಕಿತ್ಸೆಗೆ ಅಂತ ಹೈದರಾಬಾದ್​ಗೆ ಕರೆದೊಯ್ದಾಗ ರವೀಂದ್ರ ಅವರು ಆಳಂದ್ (ಕಲಬುರಗಿ) ಡಿವೈಎಸ್​​ಪಿ ಆಗಿದ್ದರಂತೆ. ಅವನು ಟ್ರೀಟ್ಮೆಂಟ್ ಪಡೆದು ವಾಪಸ್ಸು ಬಂದಾಗ ಲೊಕೇಷನ್ ಬಸವಕಲ್ಯಾಣ ತಾಲ್ಲೂಕಿನ ಯಾವುದೋ ಹಳ್ಳಿಯನ್ನು ತೋರಿಸುತಿತ್ತು, ಚಿಕಿತ್ಸೆಗಾಗಿ ಅವನು ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿದ್ದ ಎಂದು ರವೀಂದ್ರ ಹೇಳುತ್ತಾರೆ.

ಬಾಗಲಕೋಟೆ: ಕೊಲೆಯಾದ ಕುಖ್ಯಾತ ರೌಡಿ ಬಾಗಪ್ಪ ಹರಿಜನ್ ಶೋಕಿಲಾಲನೇ? ನಿವೃತ್ತ ಡಿವೈಎಸ್​​ಪಿ ರವೀಂದ್ರ ಅವರು ಹೇಳುವ ಪ್ರಕಾರ ಬಾಗಪ್ಪನಿಗೆ ಬಂಗಾರದ ಮೇಲೆ ಮತ್ತು ಹೆಣ್ಣಿನ ಮೇಲೆ ಜಾಸ್ತಿ ಒಲವಿತ್ತು, ಅವನೊಬ್ಬ ಸ್ತ್ರೀಲೋಲ. ಸಾಮಾನ್ಯವಾಗಿ ಹೆಣ್ಣುಗಳ ಆಸೆ ಇರುವವರಿಗೆ ಹೆಂಡದ ಚಟವೂ ಇರುತ್ತದೆ. ಅದರೆ ಬಾಗಪ್ಪ ಕುಡುಕನಾಗಿರಲಿಲ್ಲ, ಮದ್ಯದಿಂದ ಅವನು ದೂರವಿದ್ದ ಅದರೆ ಊಟದ ಬಗ್ಗೆ ವಿಶೇಷ ಒಲವು ತಳೆದಿದ್ದ ಎಂದು ರವೀಂದ್ರ ಹೇಳುತ್ತಾರೆ. ತಾನು ಎಲ್ಲಿದ್ದೇನೆ ಎನ್ನುವ ಸುಳಿವು ಅವನು ಯಾವತ್ತೂ ನೀಡುತ್ತಿರಲಿಲ್ಲ, ವಿಜಯಪುರದಲ್ಲಿದ್ದರೆ ಮತ್ತೆಲ್ಲೋ ಇದ್ದೇನೆ ಅಂತ ಹೇಳುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ಅವನ ಲೊಕೋಶನ್ ಪತ್ತೆಮಾಡುವಲ್ಲಿ ಹಂತಕರು ಉತ್ತಮ ಪ್ಲ್ಯಾನ್ ಮಾಡಿದ್ದಾರೆಂದೇ ಹೇಳಬೇಕು ಎಂದು ರವೀಂದ್ರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಹುಟ್ಟೂರು ಬ್ಯಾಡಗಿಹಾಳ್​ನ ತನ್ನ ಜಮೀನಲ್ಲಿ ಕುಖ್ಯಾತ ರೌಡಿಶೀಟರ್ ಬಾಗಪ್ಪ ಹರಿಜನ್ ಅಂತ್ಯಕ್ರಿಯೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.