AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ.2ರಂದು ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಭೀಮ್ ಆರ್ಮಿ ಬೆಂಬಲ, ಕಂಡಿಷನ್ಸ್​​ ಅಪ್ಲೈ

ನ.2ರಂದು ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಭೀಮ್ ಆರ್ಮಿ ಬೆಂಬಲ, ಕಂಡಿಷನ್ಸ್​​ ಅಪ್ಲೈ

ರಮೇಶ್ ಬಿ. ಜವಳಗೇರಾ
|

Updated on: Oct 28, 2025 | 8:39 PM

Share

ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್​ಎಸ್​ಎಸ್​ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಒಮ್ಮತ ಮೂಡದೇ ಗೊಂದಲ, ಗದ್ದಲದಲ್ಲೇ ಅಂತ್ಯವಾಗಿದೆ. ಆರ್​​ಎಸ್​​ಎಸ್​ ಹಾಗೂ ಭೀಮ್ ಆರ್ಮಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಆರ್​ಎಸ್​ಎಸ್ ಭಗವಾ ಧ್ವಜ ಬಿಟ್ಟು​​ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನದಲ್ಲಿ ಸಂವಿಧಾನದ ಪೀಠಿಕೆ ಹಾಗೂ ಭಾರತದ ತ್ರಿವರ್ಣ ಧ್ವಜ ಹಿಡಿದ್ರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ಇಲ್ಲ ಎಂದು ಭೀಮ್ ಆರ್ಮಿ ನಾಯಕರು ಕಡ್ಡಿ ಮುಂರಿದಂತೆ ಹೇಳಿದ್ದಾರೆ.

ಕಲಬುರಗಿ, (ಅಕ್ಟೋಬರ್ 28): ಚಿತ್ತಾಪುರದಲ್ಲಿ RSS ಪಥಸಂಚಲನದ ವಿಚಾರವಾಗಿ ಹೈಕೋರ್ಟ್​ ಸೂಚನೆ ಮೇರೆಗೆ ಇಂದು (ಅಕ್ಟೋಬರ್ 28) ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ಶಾಂತಿ ಸಭೆ ನಡೆದಿದ್ದು, ಈ ವೇಳೆ ಭಾರೀ ಹೈಡ್ರಾಮಾವೇ ನಡೆದಿದೆ. ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್​ಎಸ್​ಎಸ್​ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಒಮ್ಮತ ಮೂಡದೇ ಗೊಂದಲ, ಗದ್ದಲದಲ್ಲೇ ಅಂತ್ಯವಾಗಿದೆ. ಆರ್​​ಎಸ್​​ಎಸ್​ ಹಾಗೂ ಭೀಮ್ ಆರ್ಮಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇನ್ನು ಆರ್​ಎಸ್​ಎಸ್ ಭಗವಾ ಧ್ವಜ ಬಿಟ್ಟು​​ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನದಲ್ಲಿ ಸಂವಿಧಾನದ ಪೀಠಿಕೆ ಹಾಗೂ ಭಾರತದ ತ್ರಿವರ್ಣ ಧ್ವಜ ಹಿಡಿದ್ರೆ ಮಾತ್ರ ಬೆಂಬಲ ಕೊಡುತ್ತೇವೆ. ಇಲ್ಲ ಅಂದರೆ ಇಲ್ಲ ಎಂದು ಭೀಮ್ ಆರ್ಮಿ ನಾಯಕರು ಕಡ್ಡಿ ಮುಂರಿದಂತೆ ಹೇಳಿದ್ದಾರೆ.