ಅವಧಿ ಮುಗಿದರು ಚಿಕಿತ್ಸೆಗೆ ಸಿದ್ಧವಾಗಿಲ್ಲ BIEC ಕೋವಿಡ್ ಕೇರ್ ಸೆಂಟರ್

[lazy-load-videos-and-sticky-control id=”yn5iuMQp9jw”] ನೆಲಮಂಗಲ: ಬೆಂಗಳೂರು ತುಮಕೂರು ರಸ್ತೆಯ ಮಾದವಾರದಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ರೋಗಲಕ್ಷಣಗಳು ಇಲ್ಲದ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಕೇರ್ ಸೆಂಟರ್ ಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ಆದರೆ ಇನ್ನೂ BIEC ಕೋವಿಡ್ ಕೇರ್ ಸೆಂಟರ್ ಸಿದ್ದವಾಗಿಲ್ಲ. ಜೂನ್ 29ಕ್ಕೆ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಆದೇಶ ನೀಡಲಾಗಿದ್ದು, ಜೂನ್ 30ರಿಂದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ಪ್ರಾರಂಭದಲ್ಲಿ 7000 […]

ಅವಧಿ ಮುಗಿದರು ಚಿಕಿತ್ಸೆಗೆ ಸಿದ್ಧವಾಗಿಲ್ಲ BIEC ಕೋವಿಡ್ ಕೇರ್ ಸೆಂಟರ್
ಸಾಧು ಶ್ರೀನಾಥ್​

Updated on: Jul 19, 2020 | 6:40 PM

[lazy-load-videos-and-sticky-control id=”yn5iuMQp9jw”]

ನೆಲಮಂಗಲ: ಬೆಂಗಳೂರು ತುಮಕೂರು ರಸ್ತೆಯ ಮಾದವಾರದಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ರೋಗಲಕ್ಷಣಗಳು ಇಲ್ಲದ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಕೇರ್ ಸೆಂಟರ್ ಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರು. ಆದರೆ ಇನ್ನೂ BIEC ಕೋವಿಡ್ ಕೇರ್ ಸೆಂಟರ್ ಸಿದ್ದವಾಗಿಲ್ಲ.

ಜೂನ್ 29ಕ್ಕೆ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ಆದೇಶ ನೀಡಲಾಗಿದ್ದು, ಜೂನ್ 30ರಿಂದ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿತ್ತು. ಪ್ರಾರಂಭದಲ್ಲಿ 7000 ಬೆಡ್ ಉದ್ದೇಶಿಸಿ ಕೆಲಸ ಪ್ರಾರಂಭಿಸಲಾಗಿತ್ತು, ನಂತರ 7000 ಬೆಡ್ ಗಳ ಬದಲಿಗೆ 10100 ಬೆಡ್ ಗಳ ವ್ಯವಸ್ಥೆ ಮಾಡಲು ಸರ್ಕಾರ ಸೂಚನೆ ನೀಡಿತ್ತು. ಜುಲೈ 15ರ ವೇಳೆಗೆ ಕೋವಿಡ್ ಕೇರ್ ಸೆಂಟರ್ ನಿರ್ಮಾಣ‌ ಆರೈಕೆಗೆ ಸಿದ್ದವಾಗಬೇಕಿತ್ತು, ಆದರೆ ಅವದಿ ಮುಗಿದಿದ್ದರು ಇದುವರೆಗೂ ಕೋವಿಡ್ ಕೇರ್ ಸೆಂಟರ್‌ ಸಿದ್ದವಾಗಿಲ್ಲ .

ಈ ನಡುವೆ ಕೋವಿಡ್ ಕೇರ್ ಸೆಂಟರ್‌ ನಿರ್ಮಾಣದಲ್ಲಿ ಭಾರೀ ಹಗರಣ ನಡೆದಿದೆಯೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಆರೋಪ ಮಾಡಿದ್ದರು. ಹಾಸಿಗೆ ದಿಂಬು, ಮಂಚ ಖರೀದಿಗೆ ಸೂಚಿಸಿದ್ರು ಬಾಡಿಗೆಗೆ ಪಡೆದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಮುಖ್ಯಮಂತ್ರಿಗಳು ಹಾಸಿಗೆ ದಿಂಬು ಮಂಚಗಳನ್ನ ಖರೀದಿ ಮಾಡಲು ಸೂಚನೆ ನೀಡಿದ್ರು, ಸರ್ಕಾರದ ಈ ನಡೆಯಿಂದ ಅಧಿಕಾರಿಗಳು ಹೆದರಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಕಾರ್ಯ ವಿಳಂಭವಾಗುತ್ತಿದೆಯ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

Published On - 11:12 am, Sun, 19 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us