ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕೆಲವು ಗೆಳೆಯರಾಗಿದ್ದಾರೆ, ಕೆಲವು ಗುಂಪುಗಳಾಗಿವೆ. ಆದರೆ ಇದೀಗ ಟಾಸ್ಕ್ನ ಕಾರಣಕ್ಕೆ ಕೆಲವು ಗೆಳೆತನಗಳು ಮುರಿದು ಬಿದ್ದಿವೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಗಳ ಸಂಖ್ಯೆ ದಿನೇ-ದಿನೇ ಕಡಿಮೆ ಆಗುತ್ತಿದೆ. ಸ್ಪರ್ಧಿಗಳ ನಡುವೆ ಗೆಲ್ಲಲು ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಏನಾದರೂ ಆಗಲಿ ಗೆದ್ದೇ ಗೆಲ್ಲಬೇಕು ಎಂಬ ಹಠ ಎಲ್ಲರಲ್ಲೂ ಮೂಡಿದೆ. ಕೆಲ ಸ್ಪರ್ಧಿಗಳು ಟಾಸ್ಕ್ನ ಕಾರಣಕ್ಕೆ ಗೆಳೆಯರನ್ನು ಬಿಟ್ಟುಕೊಟ್ಟಿದ್ದಾರೆ, ಹೊಸ ಗೆಳೆತನಗಳನ್ನು ಪ್ರಾರಂಭ ಮಾಡಿದ್ದಾರೆ. ಚೆಂಡನ್ನು ಗೋಲ್ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿಗೆ ಕೈಕೊಟ್ಟಿದ್ದಾರೆ. ಇದು ಗೌತಮಿಗೆ ತೀವ್ರ ಸಿಟ್ಟು ತರಿಸಿದೆ, ಮಂಜಣ್ಣನ ಗೆಳೆತನಕ್ಕೆ ಗೌತಮಿ ಎಳ್ಳು ನೀರು ಬಿಟ್ಟಂತೆ ತೋರುತ್ತಿದೆ. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us