ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಮಹಾಪ್ರಭು ಹಾಗೂ ಮಹಾರಾಣಿ ನಡುವೆ ಕಿತ್ತಾಟ ಶುರುವಾಗಿದೆ. ಇದನ್ನು ಕಂಡು ಮನೆಯ ಇತರೆ ಸದಸ್ಯರು ಹೈರಾಣಾಗಿದ್ದಾರೆ. ಕೆಲವರಿಗಂತೂ ಈ ಟಾಸ್ಕ್ ಮುಗಿದರೆ ಸಾಕು ಎನಿಸಿದೆ.
ಬಿಗ್ಬಾಸ್ ಮನೆಯಲ್ಲಿ ಮಹಾರಾಜ-ಮಹಾರಾಣಿಯರ ನಡುವೆ ಜಗಳ ಜೋರಾಗಿದೆ. ಈ ಇಬ್ಬರ ಜಗಳದ ಮಧ್ಯೆ ಪ್ರಜೆಗಳು ಹೈರಾಣಾಗಿದ್ದಾರೆ. ಮೋಕ್ಷಿತಾ ಮಹಾರಾಣಿ ಆಗಿದ್ದಾರೆ. ಇದು ಮಹಾಪ್ರಭು ಉಗ್ರಂ ಮಂಜು ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉರಿದು ಹೋಗಿದ್ದ ಉಗ್ರಂ ಮಂಜು, ಮೋಕ್ಷಿತಾ ಈ ಹಿಂದಿನ ಎಪಿಸೋಡ್ನಲ್ಲಿ ಕಣ್ಣೀರು ಹಾಕಿದ್ದನ್ನು ವ್ಯಂಗ್ಯ ಮಾಡಿದ್ದಾರೆ. ಇದರಿಂದ ಕೋಪಕೊಂಡ ಮೋಕ್ಷಿತಾ, ಉಗ್ರಂ ಮಂಜು ಮಾತಿಗೆ ಥೂ ಎಂದು ಉಗಿದಿದ್ದಾರೆ. ಇದನ್ನೆಲ್ಲ ನೋಡುತ್ತಾ ಬೇಸತ್ತಿರುವ ಹನುಮ, ‘ಈ ಅಣ್ಣ-ತಂಗಿ ನಡುವೆ ಹೊಂದಾಣಿಕೆ ಇಲ್ಲ, ಇನ್ನು ಪ್ರಜೆಗಳು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

