ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 8ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮಂಜು ಜೊತೆ ದಿವ್ಯಾ ಸುರೇಶ್ (Divya Suresh) ಅವರಿಗೆ ಮೊದಲಿನಿಂದಲೂ ಆತ್ಮೀಯತೆ ಇತ್ತು. ದೊಡ್ಮನೆಯೊಳಗೆ ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಮಂಜು ವಿನ್ (Bigg Boss Winner) ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದಾಗ ಅತಿ ಹೆಚ್ಚು ಸಂಭ್ರಮಿಸಿದ್ದೇ ದಿವ್ಯಾ ಸುರೇಶ್. ತಾವೇ ಗೆದ್ದಂತೆ ಅವರು ಕುಣಿದು ಕುಪ್ಪಳಿಸಿದರು. ಆನಂದಭಾಷ್ಪ ಸುರಿಸಿದರು. ಮಂಜು (Manju Pavagada) ಕುಟುಂಬದವರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಈ ಬಗ್ಗೆ ಮಂಜು ಮಾತನಾಡಿದ್ದಾರೆ.
ಬಿಗ್ ಬಾಸ್ ಟ್ರೋಫಿ ಗೆದ್ದು ಬಂದ ಬಳಿಕ ಮೊದಲ ಬಾರಿಗೆ ದಿವ್ಯಾ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ರಾಜೀವ್, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್ ನನ್ನ ಆಪ್ತ ಸ್ನೇಹಿತರು. ನಾನು ಗೆದ್ದಾಗ ಎಲ್ಲರೂ ಖುಷಿಪಟ್ಟರು. ದಿವ್ಯಾ ಸುರೇಶ್ ಅವರದ್ದು ಒಂದು ಕೈ ಮೇಲಿತ್ತು. ಅವರು ಕುಣಿದಿದ್ದರಲ್ಲಿ ಆಶ್ಚರ್ಯ ಇಲ್ಲ. ಅವರು ನನಗೆ ತುಂಬಾ ಆತ್ಮೀಯ ಗೆಳತಿ’ ಎಂದು ಮಂಜು ಹೇಳಿದ್ದಾರೆ. ಇನ್ನೂ ಅನೇಕ ವಿಚಾರಗಳನ್ನು ಅವರು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’ ಫ್ಯಾನ್ಸ್ ಹೇಳಿದ್ದೇನು?
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್