AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು.

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?
ಅರವಿಂದ್​-ದಿವ್ಯಾ
TV9 Web
| Edited By: |

Updated on:Aug 09, 2021 | 12:18 PM

Share

ಮಂಜು ಪಾವಗಡ ಅವರು ಕನ್ನಡ ಬಿಗ್​ ಬಾಸ್​ ಸೀಸನ್ 8ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅರವಿಂದ್​ ಹಾಗೂ ಮಂಜು ನಡುವೆ ಕಿಚ್ಚ ಸುದೀಪ್​ ಅವರು ಮಂಜು ಕೈ ಎತ್ತುವ ಮೂಲಕ ವಿನ್ನರ್​ ಹೆಸರು ಘೋಷಣೆ ಮಾಡಿದ್ದಾರೆ. ಈ ವಿಚಾರ ಮಂಜು ಅವರ ಅಭಿಮಾನಿ ಬಳಗಕ್ಕೆ ಸಾಕಷ್ಟು ಖುಷಿ ನೀಡಿದೆ. ಈ ಮಧ್ಯೆ ಮಂಜು ಗೆಲುವು ‘ಅರವಿಯಾ’ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು. ಪ್ರತಿಯೊಂದು ವಿಚಾರವನ್ನೂ ಹೆಚ್ಚು ಕಾನ್ಫಿಡೆಂಟ್​ ಆಗಿ ಮಾಡುತ್ತಿದ್ದರು.

ಇನ್ನು ಅರವಿಂದ್ ಹಾಗೂ ದಿವ್ಯಾ ಅವರ ನಡುವಿನ ಪ್ರೀತಿ-ಪ್ರೇಮ ವಿಚಾರ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಳ್ಳೋಕೆ ಕಾರಣವಾಗಿತ್ತು. ಅರವಿಂದ್​ ಮತ್ತು ದಿವ್ಯಾರನ್ನು ‘ಅರವಿಯಾ’ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯೋಕೆ ಆರಂಭಿಸಿದ್ದರು. ಅವರ ಅಭಿಮಾನಿ ಬಳಗ ಹಿರಿದಾಗೋಕೆ ಇದು ಕೂಡ ಕಾರಣವಾಗಿತ್ತು.

ಸದ್ಯ, ಮಂಜು ಪಾವಗಡ ಗೆದ್ದಿರೋದು ಅರವಿಯಾ ಫ್ಯಾನ್ಸ್​ಗೆ ಬೇಸರ ತರಿಸಿದೆ. ‘ಈ ತೀರ್ಪು ಸಾಕಷ್ಟು ಬೇಸರ ಮೂಡಿಸಿದೆ’ ಎಂದು ಕೆಲವರು ಹೇಳಿದ್ದಾರೆ. ‘ಅರವಿಂದ್​ ಬಿಗ್​ ಬಾಸ್​ ಗೆಲ್ಲದೆ ಇರಬಹುದು. ಆದರೆ, ಅವರು ನಮ್ಮ ಹೃದಯ ಗೆದ್ದಿದ್ದಾರೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.  ‘ಇದು ನಿರಾಶಾದಾಯಕ ತೀರ್ಪು. ಅರವಿಂದ್​ ಕೆಪಿ ನಿಜವಾದ ವಿನ್ನರ್​​’ ಎಂದಿದ್ದಾರೆ ಅರವಿಯಾ ಫ್ಯಾನ್ಸ್​.

ಇನ್ನು, ಮಂಜು ಗೆಲುವಿಗೆ ಅನೇಕರು ಸಂತೋಷ ಹೊರ ಹಾಕಿದ್ದಾರೆ. ನಾವು ಅಂದುಕೊಂಡಂತೆ ಯಾವುದೇ ಸೀಸನ್​ನಲ್ಲೂ ನಡೆಯುತ್ತಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಮಂಜು ಅವರೇ ವಿನ್​ ಆಗಿದ್ದಾರೆ ಎಂದು ಕೆಲವರು ಸಂತಸ ಕೂಡ ಮೂಡಿಸಿದ್ದಾರೆ.

ಇದನ್ನೂ ಓದಿ:Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ 

Published On - 12:14 pm, Mon, 9 August 21

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?