AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು.

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?
ಅರವಿಂದ್​-ದಿವ್ಯಾ
TV9 Web
| Edited By: |

Updated on:Aug 09, 2021 | 12:18 PM

Share

ಮಂಜು ಪಾವಗಡ ಅವರು ಕನ್ನಡ ಬಿಗ್​ ಬಾಸ್​ ಸೀಸನ್ 8ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಅದ್ದೂರಿ ವೇದಿಕೆ ಮೇಲೆ ಅರವಿಂದ್​ ಹಾಗೂ ಮಂಜು ನಡುವೆ ಕಿಚ್ಚ ಸುದೀಪ್​ ಅವರು ಮಂಜು ಕೈ ಎತ್ತುವ ಮೂಲಕ ವಿನ್ನರ್​ ಹೆಸರು ಘೋಷಣೆ ಮಾಡಿದ್ದಾರೆ. ಈ ವಿಚಾರ ಮಂಜು ಅವರ ಅಭಿಮಾನಿ ಬಳಗಕ್ಕೆ ಸಾಕಷ್ಟು ಖುಷಿ ನೀಡಿದೆ. ಈ ಮಧ್ಯೆ ಮಂಜು ಗೆಲುವು ‘ಅರವಿಯಾ’ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಅರವಿಂದ್​ ಅವರು ಬೈಕ್​ ರೇಸ್ ಹಿನ್ನೆಲೆಯಿಂದ ಬಂದವರು. ಚಿತ್ರರಂಗಕ್ಕೂ ಅವರಿಗೂ ಹೆಚ್ಚು ಒಡನಾಟ ಇರಲಿಲ್ಲ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಕೊಂಚವೂ ಹೆದರದೇ ಅರವಿಂದ್​ ಅವರು ಮುನ್ನುಗ್ಗಿದ್ದರು. ಪ್ರತಿಯೊಂದು ವಿಚಾರವನ್ನೂ ಹೆಚ್ಚು ಕಾನ್ಫಿಡೆಂಟ್​ ಆಗಿ ಮಾಡುತ್ತಿದ್ದರು.

ಇನ್ನು ಅರವಿಂದ್ ಹಾಗೂ ದಿವ್ಯಾ ಅವರ ನಡುವಿನ ಪ್ರೀತಿ-ಪ್ರೇಮ ವಿಚಾರ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಳ್ಳೋಕೆ ಕಾರಣವಾಗಿತ್ತು. ಅರವಿಂದ್​ ಮತ್ತು ದಿವ್ಯಾರನ್ನು ‘ಅರವಿಯಾ’ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯೋಕೆ ಆರಂಭಿಸಿದ್ದರು. ಅವರ ಅಭಿಮಾನಿ ಬಳಗ ಹಿರಿದಾಗೋಕೆ ಇದು ಕೂಡ ಕಾರಣವಾಗಿತ್ತು.

ಸದ್ಯ, ಮಂಜು ಪಾವಗಡ ಗೆದ್ದಿರೋದು ಅರವಿಯಾ ಫ್ಯಾನ್ಸ್​ಗೆ ಬೇಸರ ತರಿಸಿದೆ. ‘ಈ ತೀರ್ಪು ಸಾಕಷ್ಟು ಬೇಸರ ಮೂಡಿಸಿದೆ’ ಎಂದು ಕೆಲವರು ಹೇಳಿದ್ದಾರೆ. ‘ಅರವಿಂದ್​ ಬಿಗ್​ ಬಾಸ್​ ಗೆಲ್ಲದೆ ಇರಬಹುದು. ಆದರೆ, ಅವರು ನಮ್ಮ ಹೃದಯ ಗೆದ್ದಿದ್ದಾರೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.  ‘ಇದು ನಿರಾಶಾದಾಯಕ ತೀರ್ಪು. ಅರವಿಂದ್​ ಕೆಪಿ ನಿಜವಾದ ವಿನ್ನರ್​​’ ಎಂದಿದ್ದಾರೆ ಅರವಿಯಾ ಫ್ಯಾನ್ಸ್​.

ಇನ್ನು, ಮಂಜು ಗೆಲುವಿಗೆ ಅನೇಕರು ಸಂತೋಷ ಹೊರ ಹಾಕಿದ್ದಾರೆ. ನಾವು ಅಂದುಕೊಂಡಂತೆ ಯಾವುದೇ ಸೀಸನ್​ನಲ್ಲೂ ನಡೆಯುತ್ತಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಿಲ್ಲ. ಮಂಜು ಅವರೇ ವಿನ್​ ಆಗಿದ್ದಾರೆ ಎಂದು ಕೆಲವರು ಸಂತಸ ಕೂಡ ಮೂಡಿಸಿದ್ದಾರೆ.

ಇದನ್ನೂ ಓದಿ:Manju Pavagada: ನನ್ನ ಗೆಲುವಿಗೆ ಅರವಿಂದ್ ಸ್ಫೂರ್ತಿ ಎಂದ ಬಿಗ್ ಬಾಸ್ ಕನ್ನಡ 8 ವಿಜೇತ ಮಂಜು ಪಾವಗಡ 

Published On - 12:14 pm, Mon, 9 August 21

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!