Manju Pavagada: ‘ಇವರು ಒಂದು ಕೈ ಮೇಲೆ’; ಬಿಗ್​ ಬಾಸ್​ ಗೆದ್ದ ಬಳಿಕ ದಿವ್ಯಾ​ ಬಗ್ಗೆ ಮಂಜು ಪಾವಗಡ ಮೊದಲ ಮಾತು

Bigg Boss Winner: ಮಂಜು ಪಾವಗಡ ವಿನ್​ ಎಂದು ಕಿಚ್ಚ ಸುದೀಪ್​ ಅವರು ಘೋಷಿಸಿದಾಗ ಅತಿ ಹೆಚ್ಚು ಸಂಭ್ರಮಿಸಿದ್ದೇ ದಿವ್ಯಾ ಸುರೇಶ್​. ತಾವೇ ಗೆದ್ದಂತೆ ಅವರು ಕುಣಿದು ಕುಪ್ಪಳಿಸಿದರು.

Manju Pavagada: ‘ಇವರು ಒಂದು ಕೈ ಮೇಲೆ’; ಬಿಗ್​ ಬಾಸ್​ ಗೆದ್ದ ಬಳಿಕ ದಿವ್ಯಾ​ ಬಗ್ಗೆ ಮಂಜು ಪಾವಗಡ ಮೊದಲ ಮಾತು
| Updated By: ಮದನ್​ ಕುಮಾರ್​

Updated on: Aug 09, 2021 | 2:28 PM

ಮಂಜು ಪಾವಗಡ ಅವರು ಬಿಗ್​ ಬಾಸ್​ ಕನ್ನಡ (Bigg Boss Kannada) ಸೀಸನ್​ 8ರ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಮಂಜು ಜೊತೆ ದಿವ್ಯಾ ಸುರೇಶ್​ (Divya Suresh) ಅವರಿಗೆ ಮೊದಲಿನಿಂದಲೂ ಆತ್ಮೀಯತೆ ಇತ್ತು. ದೊಡ್ಮನೆಯೊಳಗೆ ಇಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಮಂಜು ವಿನ್​ (Bigg Boss Winner) ಎಂದು ಕಿಚ್ಚ ಸುದೀಪ್​ ಅವರು ಘೋಷಿಸಿದಾಗ ಅತಿ ಹೆಚ್ಚು ಸಂಭ್ರಮಿಸಿದ್ದೇ ದಿವ್ಯಾ ಸುರೇಶ್​. ತಾವೇ ಗೆದ್ದಂತೆ ಅವರು ಕುಣಿದು ಕುಪ್ಪಳಿಸಿದರು. ಆನಂದಭಾಷ್ಪ ಸುರಿಸಿದರು. ಮಂಜು (Manju Pavagada) ಕುಟುಂಬದವರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಈ ಬಗ್ಗೆ ಮಂಜು ಮಾತನಾಡಿದ್ದಾರೆ.

ಬಿಗ್​ ಬಾಸ್​ ಟ್ರೋಫಿ ಗೆದ್ದು ಬಂದ ಬಳಿಕ ಮೊದಲ ಬಾರಿಗೆ ದಿವ್ಯಾ ಬಗ್ಗೆ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ರಾಜೀವ್​, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್​ ನನ್ನ ಆಪ್ತ ಸ್ನೇಹಿತರು.  ನಾನು ಗೆದ್ದಾಗ ಎಲ್ಲರೂ ಖುಷಿಪಟ್ಟರು. ದಿವ್ಯಾ ಸುರೇಶ್​ ಅವರದ್ದು ಒಂದು ಕೈ ಮೇಲಿತ್ತು. ಅವರು ಕುಣಿದಿದ್ದರಲ್ಲಿ ಆಶ್ಚರ್ಯ ಇಲ್ಲ. ಅವರು ನನಗೆ ತುಂಬಾ ಆತ್ಮೀಯ ಗೆಳತಿ’ ಎಂದು ಮಂಜು ಹೇಳಿದ್ದಾರೆ. ಇನ್ನೂ ಅನೇಕ ವಿಚಾರಗಳನ್ನು ಅವರು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಮಂಜು ಪಾವಗಡ ಗೆದ್ದ ವಿಚಾರಕ್ಕೆ ‘ಅರವಿಯಾ’​ ಫ್ಯಾನ್ಸ್​ ಹೇಳಿದ್ದೇನು?

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

Follow us