Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪಂದನ ವಿಜಯ್ ಸಾವು; ಒಳ್ಳೆಯವರ ಮೇಲೆ ದೇವರಿಗೆ ಅದ್ಯಾಕೆ ಅಷ್ಟು ಪ್ರೀತಿ ಅಂತ ಗೊತ್ತಾಗಲ್ಲ: ಜಯಮಾಲಾ, ಹಿರಿಯ ನಟಿ

ಸ್ಪಂದನ ವಿಜಯ್ ಸಾವು; ಒಳ್ಳೆಯವರ ಮೇಲೆ ದೇವರಿಗೆ ಅದ್ಯಾಕೆ ಅಷ್ಟು ಪ್ರೀತಿ ಅಂತ ಗೊತ್ತಾಗಲ್ಲ: ಜಯಮಾಲಾ, ಹಿರಿಯ ನಟಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 07, 2023 | 4:19 PM

ಸ್ಪಂದನ ಇಲ್ಲದೆ ರಾಘು ಹೇಗೆ ಬದುಕುತ್ತಾನೆ? ಅವಳಿಲ್ಲದ ಜೀವನವನ್ನು ಅವನು ನೆನಪಿಸಿಕೊಳ್ಳಲಾರ ಅಂತ ಸ್ಪಂದನ ತಾಯಿ ರೋದಿಸುತ್ತಿರುವಿದನ್ನು ಕೇಳಿಸಿಕೊಂಡಾಗ ಕರುಳು ಕಿತ್ತು ಬಂದ ಹಾಗಾಯ್ತು ಅಂತ ಜಯಮಾಲಾ ಹೇಳಿದರು.

ಬೆಂಗಳೂರು: ಸ್ಪಂದನ ನಮ್ಮ ಕುಟುಂಬದ ಭಾಗವಾಗಿದ್ದಳು, ರಾಘಣ್ಣ ಕೂಡ ನಮಗೆ ಬೇರೆಯಲ್ಲ, ನಮ್ಮ ಕಣ್ಣ ಮುಂದೆ ಬೆಳೆದ ಮಕ್ಕಳಿವು, ಗಂಡ ಹೆಂಡಿರಲ್ಲಿ ಅದೆಷ್ಟು ಅನ್ಯೋನ್ಯತೆ, ಅದೆಷ್ಟು ಪ್ರೀತಿ! ನೋಡಿದವರೆಲ್ಲ ಆದರ್ಶ ದಂಪತಿ, ಪತಿ-ಪತ್ನಿಯೆಂದರೆ ಹೀಗಿರಬೇಕು ಎನ್ನುತ್ತಿದ್ದರು ಎಂದು ಹಿರಿಯ ನಟಿ ಮತ್ತು ರಾಜಕಾರಣಿ ಜಯಮಾಲಾ (Jayamala) ಹೇಳಿದರು. ಸ್ಪಂದನ ವಿಜಯ್ (Spandana Vijay) ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗದ್ಗದಿತ ಸ್ವರದಲ್ಲಿ ಮಾತಾಡಿದ ಜಯಮಾಲಾ, ಸ್ಪಂದನ ಇಲ್ಲದೆ ರಾಘು (Vijay Raghavendra) ಹೇಗೆ ಬದುಕುತ್ತಾನೆ? ಅವಳಿಲ್ಲದ ಜೀವನವನ್ನು ಅವನು ನೆನಪಿಸಿಕೊಳ್ಳಲಾರ ಅಂತ ಸ್ಪಂದನ ತಾಯಿ ರೋದಿಸುತ್ತಿರುವಿದನ್ನು ಕೇಳಿಸಿಕೊಂಡಾಗ ಕರುಳು ಕಿತ್ತು ಬಂದ ಹಾಗಾಯ್ತು ಅಂತ ಹೇಳಿದರು. ದೇವರಿಗೆ ಯಾಕೆ ಒಳ್ಳೆಯವರ ಮೇಲೆ ಪ್ರೀತಿಯೋ ಗೊತ್ತಾಗೋದಿಲ್ಲ, ಸ್ಪಂದನಳ ಅತ್ಮಕ್ಕೆ ಶಾಂತಿ ಸಿಗಲಿ ಮತ್ತು ಅಕೆಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಹಿರಿಯ ನಟಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ