ವಿಧಾನಸೌಧದ ಆವರಣದಲ್ಲಿ ಹೋಳಿ ಹಬ್ಬದ ರಂಗಿನಾಟ ಆಡಿದ ವಿಜಯೇಂದ್ರ ಮತ್ತು ಬಿಜೆಪಿ ಶಾಸಕರು

ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2025 | 5:54 PM

ಎಲ್ಲರಿಂದ ಬಣ್ಣ ಹಚ್ಚಿಸಿಕೊಂಡು ತಾನೂ ಎಲ್ಲರಿಗೆ ಬಣ್ಣ ಹಚ್ಚಿ ಮಾಧ್ಯಮಗಳೊಂದಿಗೆ ಮಾತಾಡಿದ ವಿಜಯೇಂದ್ರ ನಾಡಿನ ಜನತೆಗೆ ಹೋಳಿಹಬ್ಬದ ಶುಭಾಷಯ ಕೋರಿದರು. ಅವರಿಗಿಂತ ಮೊದಲು ಶಾಸಕ ಜನಾರ್ಧನರೆಡ್ಡಿ ಹಬ್ಬದ ವಿಶ್ ಮಾಡಿದರು. ಇವರೆಲ್ಲ ಬಣ್ಣದಾಟದಲ್ಲಿ ಸಂಭ್ರಮಿಸುತ್ತಿರುವಾಗಲೇ ಕಂದಾಯ ಕೃಷ್ಣ ಭೈರೇಗೌಡ ಅಲ್ಲಿಂದ ಅವಸರದಲ್ಲಿ ಪಾರಾಗುವುದನ್ನು ನೋಡಬಹುದು.

ಬೆಂಗಳೂರು ಮಾರ್ಚ್ 14: ಇವತ್ತು ಹೋಳಿ ಹಬ್ಬದ ಸಂಭ್ರಮ, ದೇಶದೆಲ್ಲೆಡೆ ಜನ ರಂಗಿನಾಟ ಆಡಿದರು. ನಮ್ಮ ಜನಪ್ರತಿನಿಧಿಗಳು ದೂರ ಉಳಿಯುವುದು ಸಾಧ್ಯವೇ? ವಿಧಾನಸಭೆಯಿಂದ ಹೊರಬರುತ್ತಿದ್ದಂತೆಯೇ ಬಿಜೆಪಿಯ ಶಾಸಕರು ಸಾಂಕೇತಿಕವಾಗಿ ಒಬ್ಬರಿಗೊಬ್ಬರು ಬಣ್ಣಹಚ್ಚಿ ಸಂಭ್ರಮಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಗಾಲಿ ಜನಾರ್ಧನ ರೆಡ್ಡಿ, ಶರಣು ಸಲಗರ, ಟಿಎ ಶ್ರೀವತ್ಸ ಮೊದಲಾದವರನ್ನು ದೃಶ್ಯಗಳಲ್ಲಿ ನೋಡಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Holi: ಅನ್ಯರ ನಿಂದನೆಗೇ ಇರುವ ಹಬ್ಬ ಹೋಳಿ ಹುಣ್ಣಿಮೆ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.