ಅಮೆರಿಕದಲ್ಲಿ ಕೂತು ಬಾಗಲಕೋಟೆ ಮನೆ ಕಳ್ಳತನ ತಪ್ಪಿಸಿದ ಶೃತಿ: ಆಗಿದ್ದೇನು?

Edited By:

Updated on: Aug 27, 2025 | 10:23 PM

ಅವರು ನಿವೃತ್ತ ಇಂಜಿನಿಯರ್ ,ಮನೆಯಲ್ಲಿ ಇಬ್ಬರು ವೃದ್ದ ದಂಪತಿ ಮಾತ್ರ ವಾಸವಾಗಿದ್ದಾರೆ. ಇದನ್ನೇ ಬಂಡವಾಳ‌ ಮಾಡಿಕೊಂಡ ಚಡ್ಡಿ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಎಂದು ಮನೆಯೊಳಗೆ ನುಗ್ಗಿದೆ. ಆದರೆ ಇದನ್ನು ಗಮನಿಸಿದ್ದು ಅಮೇರಿಕದಲ್ಲಿ ನೆಲೆಸಿರುವ ನಿವೃತ್ತ ಇಂಜಿನಿಯರ್ ಮಗಳು ಶೃತಿ ಮೊಬೈಲ್​ ನಲ್ಲಿ ಗಮನಿಸಿದ್ದಾರೆ. ಮನೆ ಸಿಸಿ ಕ್ಯಾಮೆರಾ ಲಿಂಕ್ ಗಳು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದರಿಂದ ಕಳ್ಳರು ಮನೆಯೊಳಗೆ ನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ಮನೆಯೊಳಗಿದ್ದ ತಮ್ಮ ತಂದೆಗೆ ಕರೆ ಮಾಡಿ ಅಲರ್ಟ್​ ಮಾಡಿದ್ದಾರೆ. ಆಗ ಎಚ್ಚೆತ್ತ ಹನುಮಂತಗೌಡ ಸಂಕಪ್ಪನವರ್ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ.

ಬಾಗಲಕೋಟೆ, (ಆಗಸ್ಟ್ 27): ಅವರು ನಿವೃತ್ತ ಇಂಜಿನಿಯರ್ ,ಮನೆಯಲ್ಲಿ ಇಬ್ಬರು ವೃದ್ದ ದಂಪತಿ ಮಾತ್ರ ವಾಸವಾಗಿದ್ದಾರೆ. ಇದನ್ನೇ ಬಂಡವಾಳ‌ ಮಾಡಿಕೊಂಡ ಚಡ್ಡಿ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಎಂದು ಮನೆಯೊಳಗೆ ನುಗ್ಗಿದೆ. ಆದರೆ ಇದನ್ನು ಗಮನಿಸಿದ್ದು ಅಮೇರಿಕದಲ್ಲಿ ನೆಲೆಸಿರುವ ನಿವೃತ್ತ ಇಂಜಿನಿಯರ್ ಮಗಳು ಶೃತಿ ಮೊಬೈಲ್​ ನಲ್ಲಿ ಗಮನಿಸಿದ್ದಾರೆ. ಮನೆ ಸಿಸಿ ಕ್ಯಾಮೆರಾ ಲಿಂಕ್ ಗಳು ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿದ್ದರಿಂದ ಕಳ್ಳರು ಮನೆಯೊಳಗೆ ನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ಮನೆಯೊಳಗಿದ್ದ ತಮ್ಮ ತಂದೆಗೆ ಕರೆ ಮಾಡಿ ಅಲರ್ಟ್​ ಮಾಡಿದ್ದಾರೆ. ಆಗ ಎಚ್ಚೆತ್ತ ಹನುಮಂತಗೌಡ ಸಂಕಪ್ಪನವರ್ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದರಿಂದ ಮನೆ ದರೋಡೆಯೊಂದು ತಪ್ಪಿದಂತಾಗಿದೆ.

Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More