AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು

Malatesh Jaggin
| Updated By: ಮದನ್​ ಕುಮಾರ್​|

Updated on: Jun 05, 2025 | 9:58 PM

Share

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೂಡ ಅಪ್ಪಟ ಆರ್​ಸಿಬಿ ಫ್ಯಾನ್. ಆರ್​ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಅವರು ಕೂಡ ಹೋಗಿದ್ದರು. ಅಷ್ಟುಹೊತ್ತಿಗಾಗಲೇ ಕಾಲ್ತುಳಿತ ಉಂಟಾಗಿತ್ತು. ಆ ಘಟನೆ ಹೇಗಿತ್ತು ಎಂಬುದನ್ನು ಚಂದನ್ ಶೆಟ್ಟಿ ಅವರು ವಿವರಿಸಿದ್ದಾರೆ. ಟಿವಿ9 ಕನ್ನಡ ಜೊತೆ ಅವರು ಮಾತನಾಡಿದ್ದಾರೆ.

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೂಡ ಅಪ್ಪಟ ಆರ್​ಸಿಬಿ (RCB) ಅಭಿಮಾನಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಂದನ್ ಶೆಟ್ಟಿ (Chandan Shetty) ಸಹ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಹೋಗಿದ್ದರು. ಅಷ್ಟುಹೊತ್ತಿಗಾಗಲೇ ಕಾಲ್ತುಳಿತ ಉಂಟಾಗಿತ್ತು. ಆ ಘಟನೆ ಹೇಗಿತ್ತು ಎಂಬುದನ್ನು ಚಂದನ್ ಶೆಟ್ಟಿ ವಿವರಿಸಿದ್ದಾರೆ. ಟಿವಿ9 ಕನ್ನಡ ಜತೆ ಅವರು ಮಾತನಾಡಿದ್ದಾರೆ. ‘ಖುಷಿಯಿಂದ ಹೋದೆ. ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂಬರ್ 3 ತನಕ ಹೋಗಲು ಸಾಧ್ಯವಾಗಲೇ ಇಲ್ಲ. ನಾನು ಬಂದಿದ್ದನ್ನು ನೋಡಿ ಜನರಿಗೆ ಖುಷಿ ಆಯಿತು. ಅಲ್ಲಿ ಜನರ ಗುಂಪು ಸೇರಿತು. ಆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು. ನಾನು ಕೂಡ ಒಂದು ಲಾಠಿ ಏಟು ತಿಂದೆ’ ಎಂದಿದ್ದಾರೆ ಚಂದನ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.