ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಭಾರತ ಮೂಲದ ಅರ್ಷಿದ್ ವೈದ್ಯಕೀಯ ಅಧ್ಯಯನಕ್ಕಾಗಿ ಮೂರು ವರ್ಷಗಳ ಹಿಂದೆ ವಿಯೆಟ್ನಾಂಗೆ ತೆರಳಿದ್ದರು. ಅವರ ಪೋಷಕರು ಬಟ್ಟೆ ವ್ಯಾಪಾರಿ ಅರ್ಜುನ್ ಮತ್ತು ಪ್ರತಿಮಾ ಎಂಬುವವರು. ಅರ್ಷಿದ್ ವೈದ್ಯಕೀಯ ಅಧ್ಯಯನಕ್ಕಾಗಿ 3 ವರ್ಷಗಳ ಹಿಂದೆ ವಿಯೆಟ್ನಾಂಗೆ ತೆರಳಿದ್ದರು. ಅವರ ಪೋಷಕರು ಬಟ್ಟೆ ವ್ಯಾಪಾರಿ ಅರ್ಷಿದ್ ಅರ್ಜುನ್ ಮತ್ತು ಪ್ರತಿಮಾ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಶಾಸಕ ಡಾ. ಪಿ. ಹರೀಶ್ ಬಾಬು ಅವರು ಅರ್ಷಿದ್ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅವರು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಶವವನ್ನು ಭಾರತಕ್ಕೆ ಕಳುಹಿಸಲು ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು.
ನವದೆಹಲಿ, ಜೂನ್ 5: ವಿಯೆಟ್ನಾಂನ (Vietnam) ಕ್ಯಾನ್ ಥೋ ನಗರದಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಮೃತನನ್ನು ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅರ್ಷಿದ್ ಆಶ್ರಿತ್ ಎಂದು ಗುರುತಿಸಲಾಗಿದೆ. ಅವರು ತೆಲಂಗಾಣದ ಕುಮುರಾಮ್ ಭೀಮ್ ಆಸಿಫಾಬಾದ್ ಜಿಲ್ಲೆಯ ಕಾಗಜ್ನಗರದವರಾಗಿದ್ದರು. ಈ ವಿಚಿತ್ರ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರ್ಷಿದ್ ತನ್ನ ಬೈಕ್ ಅನ್ನು ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಅತಿ ವೇಗದಲ್ಲಿ ಗೋಡೆಗೆ ಡಿಕ್ಕಿ ಹೊಡೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಿಂಬದಿ ಸವಾರಿ ಮಾಡುತ್ತಿದ್ದ ಆಶ್ರಿತ್ನ ಸ್ನೇಹಿತ ಅಪಘಾತದಲ್ಲಿ ಮಾರಣಾಂತಿಕ ಗಾಯಗಳನ್ನು ಅನುಭವಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos