AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandrashekhar Guruji Murder: ಹಂತಕರನ್ನು ಬಂಧಿಸಲು 5 ವಿಶೇಷ ತಂಡಗಳ ರಚನೆ, ಎಲ್ಲಾ ಕಡೆ ಹೈ ಅಲರ್ಟ್

Chandrashekhar Guruji Murder: ಹಂತಕರನ್ನು ಬಂಧಿಸಲು 5 ವಿಶೇಷ ತಂಡಗಳ ರಚನೆ, ಎಲ್ಲಾ ಕಡೆ ಹೈ ಅಲರ್ಟ್

ಆಯೇಷಾ ಬಾನು
|

Updated on:Jul 05, 2022 | 3:53 PM

ರಳವಾಸ್ತುವಿನಿಂದ ನೊಂದಿರುವ ಕೆಲ ಗ್ರಾಹಕರು ಹಲವು ಭಾರಿ ಗುರೂಜಿಗೆ ಧಮ್ಕಿ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ರೀತಿಯಲ್ಲೂ ಪೊಲೀಸರು ವಿಚಾರಕ್ಕೆ ನಡೆಸುತ್ತಿದ್ದಾರೆ. ಹಾಗೂ ಗುರೂಜಿ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿ ನಗರದ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಇಂದು (ಜುಲೈ 5) ಮಧ್ಯಾಹ್ನ 12.23ಕ್ಕೆ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಕೊಲೆ ಆಗಿದೆ. ಚಾಕುವಿನಿಂದ ಇರಿದು ಹಂತಕರು ಕೊಲೆ ಮಾಡಿದ್ದಾರೆ. ಚಂದ್ರಶೇಖರ್ ಗುರೂಜಿ ಬಾಗಲಕೋಟೆಯಲ್ಲಿ ಆಸ್ತಿ ಹೊಂದಿದ್ದರು. ಹೀಗಾಗಿ ಕೊಲೆ ಮಾಡಿರುವುದು ಆಸ್ತಿಗಾಗಿ ಎಂಬ ಶಂಕೆ ವ್ಯಕ್ತವಾಗಿದೆ. ಜಾಗದ ಸಂಬಂಧ, ಹಣಕಾಸಿನ ಸಂಬಂಧ ಕೊಲೆ ನಡೆದಿರುವ ಅನುಮಾನ ಹೆಚ್ಚಾಗಿದೆ. ಅಲ್ಲದೆ ಹಣ ಪಡೆದು ವಂಚಿಸಿರುವ ಆರೋಪ ಸಹ ಕೇಳಿ ಬಂದಿತ್ತು. ಸದ್ಯ ಪೊಲೀಸ್ ಕಮಿಷನರ್ ಹಂತಕರನ್ನು ಹಿಡಿಯಲು 5 ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ. ಸರಳವಾಸ್ತುವಿನಿಂದ ನೊಂದಿರುವ ಕೆಲ ಗ್ರಾಹಕರು ಹಲವು ಭಾರಿ ಗುರೂಜಿಗೆ ಧಮ್ಕಿ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ರೀತಿಯಲ್ಲೂ ಪೊಲೀಸರು ವಿಚಾರಕ್ಕೆ ನಡೆಸುತ್ತಿದ್ದಾರೆ. ಹಾಗೂ ಗುರೂಜಿ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿಕೆ ನೀಡಿದ್ದಾರೆ.

Published on: Jul 05, 2022 03:47 PM