ಮಂಗಳೂರು: ಮುಸ್ಲಿಂ ಮುಖಂಡರೊಂದಿಗೆ ಹೆಚ್ಎಂ ಪರಮೇಶ್ವರ್ ನಡೆಸಿದ ಸಭೆಯಲ್ಲಿ ಗದ್ದಲ
ನಮ್ಮ ಮಂಗಳೂರು ವರದಿಗಾರ ನೀಡುವ ಮಾಹಿತಿಯ ಪ್ರಕಾರ ಕೆಲ ಮುಸ್ಲಿಂ ಮುಖಂಡರು ಅಶ್ರಫ್ ಹತ್ಯೆಯ ಬಗ್ಗೆ ತಮ್ಮ ಮುಂದಿನ ಟೇಬಲ್ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಭ್ಯವಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಗೃಹ ಸಚಿವ ಪರಮೇಶ್ವರ್ ಪೊಲೀಸ್ ಕಮೀಶನರ್ ಕಚೇರಿಗೆ ತೆರಳಿದರು ಎಂದು ವರದಿಗಾರ ಹೇಳಿದ್ದಾರೆ.
ಮಂಗಳೂರು, ಮೇ 3: ಹಿಂದೂ ಕಾರ್ಯಕರ್ತ ಮತ್ತು ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನೆಲೆ ಇಂದು ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಜಿ ಪರಮೇಶ್ವರ್ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (district in charge minister Dinesh Gundu Rao) ಮತ್ತು ಮಾಜಿ ಸಚಿವ ರಮಾನಾಥ್ ರೈ ಅವರು ಕೂಡ ಹಾಜರಿದ್ದ ಸಭೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿಲ್ಲ. ನಗರದ ಸರ್ಕೀಟ್ ಹೌಸ್ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮುಸ್ಲಿಂ ಮುಖಂಡರು ಇತ್ತೀಚಿಗೆ ನಡೆದ ಗುಂಪು ಘರ್ಷಣೆಯೊಂದನ್ನು ಪ್ರಸ್ತಾಪಿಸಿದಾಗ ಅದುವರೆಗೆ ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಗದ್ದಲ ಶುರುವಾಗಿ ಅದ ತಹಬದಿಗೆ ಬರಲು ಕೊಂಚ ಸಮಯ ಹಿಡಿದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ಪಾಕಿಸ್ತಾನಿಗಳ ವಿರುದ್ಧ ಕ್ರಮ: ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ