ಚೇತನಾ ನಮ್ಮ ಮಾತು ಕೇಳುತ್ತಿರಲಿಲ್ಲ, ಫ್ರೆಂಡ್ಸ್ ಮಾತುಗಳೇ ಅವಳಿಗೆ ಮುಖ್ಯವಾಗಿತ್ತು: ಚೇತನಾ ರಾಜ್ ಅಜ್ಜಿ

ಅವಳಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ಉಮೇದಿ ಇತ್ತು, ನಾನು ದೊಡ್ಡ ಸ್ಟಾರ್ ಆಗ್ತೀನಿ ಅನ್ನುತ್ತಿದ್ದಳು, ಗೆಳೆಯರ ಮಾತು ಕಟ್ಟಿಕೊಂಡು ಓಡಾಡುತ್ತಿದ್ದಳು. ಈಗಷ್ಟೇ ಅವಳು ಡಿಗ್ರೀ ವ್ಯಾಸಂಗ ಮುಗಿಸಿದ್ದಳು, ಎಂದು ನಾರಾಯಣಮ್ಮ ಹೇಳಿದರು.

ಚೇತನಾ ನಮ್ಮ ಮಾತು ಕೇಳುತ್ತಿರಲಿಲ್ಲ, ಫ್ರೆಂಡ್ಸ್ ಮಾತುಗಳೇ ಅವಳಿಗೆ ಮುಖ್ಯವಾಗಿತ್ತು: ಚೇತನಾ ರಾಜ್ ಅಜ್ಜಿ
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 17, 2022 | 4:56 PM

Nelamangala: ಕಿರುತೆರೆ ನಟಿ ಮತ್ತು ಕೆಲ ಸಿನಿಮಾಗಳಲ್ಲೂ ನಟಿಸಿದ್ದ ಚೇತನಾ ರಾಜ್ (Chethana Raj) ಅದ್ಯಾವ ಸ್ನೇಹಿತರು ಸೊಂಟದ ಭಾಗದಲ್ಲಿ ಕೊಬ್ಬಿನಾಂಶ ಜಾಸ್ತಿಯಾಗಿದೆ ಅಂತ ಹೇಳಿದರೋ? ಕೊಬ್ಬಿನಾಂಶ (fat deposition) ತೆಗೆಸಲು ಸೋಮಾವಾರ ಬೆಂಗಳೂರಿನ ಆಸ್ಪತ್ರಯೊಂದಕ್ಕೆ ದಾಖಲಾಗಿದ್ದ ಅವರು ಅಲ್ಲಿಂದ ವಾಪಸ್ಸಾಗಿದ್ದು ಮಾತ್ರ ಹೆಣವಾಗಿ. ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಚೇತನಾ ಅವರ ಬದುಕು ಕೇವಲ 21 ನೇ ವಯಸ್ಸಿಗೆ ಮುರುಟಿಹೋಗಿದೆ. ಅವರ ಕುಟುಂಬದವರು ಆಸ್ಪತ್ರೆ ಮತ್ತು ಶಸ್ತ್ರಚಿಕಿತ್ಸೆ (surgery) ನಡೆಸಿದ ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ಸತ್ತಿದ್ದಾರೆ ಅಂತ ಅರೋಪಿಸುತ್ತಿದ್ದಾರೆ. ನಟಿಯ ಅಜ್ಜಿ ನಾರಾಯಣಮ್ಮನವರು ಟಿವಿ9 ಕನ್ನಡ ವಾಹಿನಿಯೊದಿಗೆ ದುಃಖವನ್ನು ಹಂಚಿಕೊಳ್ಳುವಾಗ ತಮ್ಮ ಮೊಮ್ಮಗಳು ದಪ್ಪವೇನೂ ಇರಲಿಲ್ಲ, ಆದರೆ ಅವಳು ಸ್ನೇಹಿತರ ಮಾತು ಕೇಳಿ ಹಾಳಾದಳು ಎಂದು ಹೇಳಿದರು.

ನೀನು ದಪ್ಪ ಇಲ್ಲ, ನಿನ್ನ ಫ್ರೆಂಡ್ ಮಾತುಗಳನ್ನು ಕೇಳಬೇಡ ಅಂತ ನಾವು ಹೇಳಿದರೂ ಅವಳು ಕೇಳಲಿಲ್ಲ. ಕೊಬ್ಬು ಕರಗಿಸಲು ಅವಳು ಯಾವ ಮಾತ್ರೆಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಅವಳು ನಮಗಿಂತ ಜಾಸ್ತಿ ತನ್ನ ಫ್ರೆಂಡ್ಸ್ ಮಾತಿಗೆ ಬೆಲೆ ನೀಡಿದಳು. ಅವಳ ಸ್ನೇಹಿತರೇ ಒಂದೂವರೆ ಲಕ್ಷಕ್ಕಿಂತ ಜಾಸ್ತಿ ಹಣವನ್ನು ಹೊಂದಿಸಿ ಅವಳನ್ನು ಆಪರೇಶನ್ ಮಾಡಿಸಿಕೊಳ್ಳಲು ಕಳಿಸಿದ್ದಾರೆ. ಅವಳಿಗೆ ಆಪರೇಶನ್ ಮಾಡಿದ ಡಾಕ್ಟರ್ ತಂದೆ-ತಾಯಿಗಳ ಸಮ್ಮತಿಗೂ ಕಾಯದೆ ಆಪರೇಶನ್ ಮಾಡಿಬಿಟ್ಟಿದ್ದಾರೆ. ಅವಳ ತಾಯಿ ರಾತ್ರಿ 9 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾಳೆ. ಮಗಳ ಮುಖವನ್ನು ನೋಡುವುದು ಕೂಡ ಅವಳಿಗೆ ಸಾಧ್ಯವಾಗಿಲ್ಲ ಎಂದು ನಾರಾಯಣಮ್ಮ ಹೇಳಿದ್ದಾರೆ.

ಅವಳಿಗೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ಉಮೇದಿ ಇತ್ತು, ನಾನು ದೊಡ್ಡ ಸ್ಟಾರ್ ಆಗ್ತೀನಿ ಅನ್ನುತ್ತಿದ್ದಳು, ಗೆಳೆಯರ ಮಾತು ಕಟ್ಟಿಕೊಂಡು ಓಡಾಡುತ್ತಿದ್ದಳು. ಈಗಷ್ಟೇ ಅವಳು ಡಿಗ್ರೀ ವ್ಯಾಸಂಗ ಮುಗಿಸಿದ್ದಳು, ಎಂದು ನಾರಾಯಣಮ್ಮ ಹೇಳಿದರು.

ಇದನ್ನೂ ಓದಿ:   Chetana Raj Death: ಫ್ಯಾಟ್​ ಸರ್ಜರಿಗೆ ಚೇತನಾ ರಾಜ್​ ಕಟ್ಟಿದ್ದ ಹಣ ಎಷ್ಟು? ಸತ್ತ ಮೇಲೂ ಹೆಚ್ಚಿತು ಆಸ್ಪತ್ರೆ ಬಿಲ್​

Follow us
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು