Kannada News Videos Chikkaballapur district Bagepalli Tehsildar office is leaking due to rain, taja suddi
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ, ದಾಖಲೆಗಳೆಲ್ಲಾ ನೀರುಪಾಲು
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ತಾಲೂಕಿನ ತಹಶೀಲ್ದಾರ್ ಕಚೇರಿ ಮಳೆ ನೀರಿನಿಂದ ಸೋರುತ್ತಿದೆ. ಕಚೇರಿ ತುಂಬಾ ನೀರು ನೀರಾಗಿದೆ. ಮಹತ್ವದ ಕಂದಾಯ ದಾಖಲೆಗಳೆಲ್ಲಾ ನೀರುಪಾಲಾಗಿದ್ದು, ಅಧಿಕಾರಿಗಳು ಮಾತ್ರ ಅಸಹಾಯಕರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಕರ್ನಾಟಕದಲ್ಲಿ ಮಳೆ ಆರ್ಭಟಿಸಿತ್ತು. ಇಂದು ಕೊಂಚ ಶಾಂತವಾಗಿದೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 17: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಿರಂತರ ಧಾರಾಕಾರ ಮಳೆ (rain) ಸುರಿಯುತ್ತಿದೆ. ಮಳೆ ನಿಂತರೂ ಮಳೆಯ ಅವಾಂತರಗಳು ನಿಲ್ಲುತ್ತಿಲ್ಲ. ಜಿಲ್ಲೆಯ ಬಾಗೇಪಲ್ಲಿಯ ತಾಲೂಕು ಕಚೇರಿ ಮಳೆಯಿಂದಾಗಿ ಸೋರುತ್ತಿದೆ. ಪರಿಣಾಮ ಮಹತ್ವದ ಕಂದಾಯ ದಾಖಲೆಗಳೆಲ್ಲಾ ನೀರುಪಾಲಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ವಿಡಿಯೋ ನೋಡಿ.