AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಳಿಗೆ ಮುಂದಾದ ಕಾಡಾನೆ: ಪ್ರವಾಸಿಗರು ಜಸ್ಟ್ ಮಿಸ್!

ದಾಳಿಗೆ ಮುಂದಾದ ಕಾಡಾನೆ: ಪ್ರವಾಸಿಗರು ಜಸ್ಟ್ ಮಿಸ್!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 28, 2025 | 7:21 PM

Share

ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಪ್ರವಾಸಿಗರು ಜೀಪ್‌ನಲ್ಲಿ ಸಫಾರಿ ಹೊರಟಿದ್ದ ವೇಳೆ ಒಂಟಿ ಸಲಗದ ಬೆನ್ನಟ್ಟಿದೆ. ಜೀಪ್ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರ ಜೀವ ಉಳಿದಿದೆ. ವಿಡಿಯೋ ನೋಡಿ.

ಚಿಕ್ಕಮಗಳೂರು, ನವೆಂಬರ್​ 28: ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆ ಬಳಿ ಪ್ರವಾಸಿಗರ ಜೀಪ್ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ನಡೆದಿದೆ. ಜಂಗಲ್‌ ಲಾಡ್ಜ್​​ನವರಿಗೆ ಸೇರಿದ ಜೀಪ್​​ನಲ್ಲಿ ಪ್ರವಾಸಿಗರು ಸಫಾರಿ ಹೊರಟಿದ್ದರು. ಈ ವೇಳೆ ಭದ್ರಾ ಬಲದಂಡೆ ನಾಲೆ ಬಳಿಯ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಏಕಾಏಕಿ ಕಾಡಾನೆ ಜೀಪ್ ಅಟ್ಟಿಸಿಕೊಂಡು ಬಂದಿದೆ.​​ ಚಾಲಕನ ಸಮಯ ಪ್ರಜ್ಞೆಯಿಂದ ಕಾಡಾನೆ ದಾಳಿಯಿಂದ ಪ್ರವಾಸಿಗರು ಜಸ್ಟ್ ಮಿಸ್ ‌ಆಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 28, 2025 06:49 PM