Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಬೆಂಗಳೂರಿಂದ ಬಾಗಲಕೋಟೆಗೆ ಹೋಗುತ್ತಿದ್ದಾಗ ಹೆಲಿಕಾಪ್ಟರ್ ನಲ್ಲಿ ಇಂಧನ ಖಾಲಿಯಾಯಿತು!

ಸಿದ್ದರಾಮಯ್ಯ ಬೆಂಗಳೂರಿಂದ ಬಾಗಲಕೋಟೆಗೆ ಹೋಗುತ್ತಿದ್ದಾಗ ಹೆಲಿಕಾಪ್ಟರ್ ನಲ್ಲಿ ಇಂಧನ ಖಾಲಿಯಾಯಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 15, 2023 | 6:40 PM

ಪ್ರಾಯಶಃ ಅದೇ ಸಮಯಕ್ಕೆ ಸಿದ್ದರಾಮಯ್ಯ ಮತ್ತವರ ಜೊತೆಯಿದ್ದ ನಾಯಕರ ಹೊಟ್ಟೆಗಳಲ್ಲೂ ಇಂಧನ ಖಾಲಿಯಾಗಿತ್ತು. ಹಾಗಾಗೇ, ಅವರೆಲ್ಲ ರಸ್ತೆ ಬದಿ ಚಿಕ್ಕ ಹೋಟೆಲೊಂದರಲ್ಲಿ ಕುಳಿತು ತಿಂಡಿ ತಿಂದರು

ಚಿತ್ರದುರ್ಗ: ಬುಧವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಂದ ಬಾಗಲಕೋಟೆಗೆ ತೆರಳುತ್ತಿದ್ದಾಗ ಚಾಪರ್ ನಲ್ಲಿ ಇಂಧನದ ಕೊರತೆಯಾದ ಕಾರಣ ಅದನ್ನು ಚಿತ್ರದುರ್ಗದ ಕ್ಯಾದಿಗೆರೆ ಗ್ರಾಮದ ಬಳಿ ಲ್ಯಾಂಡ್ ಮಾಡಲಾಗಿತ್ತು. ಪ್ರಾಯಶಃ ಅದೇ ಸಮಯಕ್ಕೆ ಸಿದ್ದರಾಮಯ್ಯ ಮತ್ತವರ ಜೊತೆಯಿದ್ದ ನಾಯಕರ ಹೊಟ್ಟೆಗಳಲ್ಲೂ ಇಂಧನ ಖಾಲಿಯಾಗಿತ್ತು. ಹಾಗಾಗೇ, ಅವರೆಲ್ಲ ರಸ್ತೆ ಬದಿ ಚಿಕ್ಕ ಹೋಟೆಲೊಂದರಲ್ಲಿ ಕುಳಿತು ತಿಂಡಿ ತಿಂದರು. ಸಿದ್ದರಾಮಯ್ಯ ಜೊತೆ ಜಮೀರ್ ಅಹ್ಮದ್ (Zameer Ahmed), ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ (Prakash Rathod) ಮೊದಲಾದವರು ಸಹ ಟಿಫಿನ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಾಪರ್ ನಲ್ಲಿ ಇಂಧನ ತುಂಬಿಸಿದ ಬಳಿಕ ಸಿದ್ದರಾಮಯ್ಯ ಬಾಗಲಕೋಟೆಗೆ ತೆರಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ