Sign In

By signing in or creating an account, you agree with Associated Broadcasting Company's Terms & Conditions and Privacy Policy.

Student writes to CM: ಕೊಪ್ಪಳದ 8ನೇ ತರಗತಿ ವಿದ್ಯಾರ್ಥಿನಿ ಬರೆದ ಅಭಿನಂದನಾ ಪತ್ರಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Student writes to CM: ಕೊಪ್ಪಳದ 8ನೇ ತರಗತಿ ವಿದ್ಯಾರ್ಥಿನಿ ಬರೆದ ಅಭಿನಂದನಾ ಪತ್ರಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2023 | 10:18 AM

ಶ್ರೇಯಾಂಕ್ ಶ್ರಮವಹಿಸಿ ಓದಿ, ವಿದ್ಯಾವಂತಳಾಗಿ ಸಮಾಜಕ್ಕೆ ತನ್ನ ಕೊಡುಗೆ ನೀಡಿ ಬೇರೆಯವರಿಗೆ ಮಾದರಿಯಾಗಲಿ ಎಂದು ಸಿಎಂ ಆಶೀರ್ವದಿಸಿದ್ದಾರೆ.

ಬೆಂಗಳೂರು: ಕೊಪ್ಪಳದ ಸರ್ಕಾರೀ ಶಾಲೆಯೊಂದರಲ್ಲಿ 8ನೇ ಈಯತ್ತೆ ವಿದ್ಯಾರ್ಥಿನಿಯಾಗಿರುವ ಶ್ರೇಯಾಂಕ್ ವಿ ಮೆಣಸಿಗಿ (Shreyank V Mensigi) ಸಿದ್ದರಾಮಯ್ಯನವರಿಗೆ (Siddaramaiah) ಪತ್ರವೊಂದನ್ನು ಬರೆದಯ ಎರಡನೇ ಬಾರಿ ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಅಭಿನಂದಿಸಿದ್ದಾಳೆ. ತನ್ನ ಪತ್ರದಲ್ಲಿ ಆಕೆ ಸಿದ್ದರಾಮಯ್ಯರ ಜನಪರ ಕಾಳಜಿಯನ್ನು ಕೊಂಡಾಡಿ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ ಅನ್ನಭಾಗ್ಯ, ಶೂಭಾಗ್ಯ, ಕ್ಷೀರಭಾಗ್ಯ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದ್ದಾಳೆ. ಸಿದ್ದರಾಮಯ್ಯ ದೀನದಲಿತರು, ಬಡವರ ಪರವಾಗಿರುವ ನಾಯಕ ಎಂದು ಶ್ರೇಯಾಂಕ್ ಶ್ಲಾಘಿಸಿದ್ದಾಳೆ. ಗಮನಿಸಬೇಕಾದ ಸಂಗತಿಯೆಂದರೆ, ಮುಖ್ಯಮಂತ್ರಿ ಮಗುವಿನ ಪತ್ರಕ್ಕೆ ಉತ್ತರ ಬರೆದಿದ್ದಾರೆ. ಆಕೆಗಿರುವ ಸಾಮಾಜಿಕ ಕಳಕಳಿಯನ್ನು (social concern) ಗಣ್ಯರು ಕೊಂಡಾಡಿದ್ದಾರೆ. ಶ್ರೇಯಾಂಕ್ ಶ್ರಮವಹಿಸಿ ಓದಿ, ವಿದ್ಯಾವಂತಳಾಗಿ ಸಮಾಜಕ್ಕೆ ತನ್ನ ಕೊಡುಗೆ ನೀಡಿ ಬೇರೆಯವರಿಗೆ ಮಾದರಿಯಾಗಲಿ ಎಂದು ಸಿಎಂ ಆಶೀರ್ವದಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ