Hassan: ಶಾಸಕ ಶಿವಲಿಂಗೇಗೌಡ ವೇದಿಕೆ ಮೇಲೆ ಕಾಣದಾದಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಗೌಡರು ಹಿಂದೆ ನಿಂತಿದ್ದನ್ನು ಗಮನಿಸಿದ ಸಿದ್ದರಾಮಯ್ಯ, ‘ಅಲ್ಯಾಕಯ್ಯ ನಿಂತಿದ್ದೀಯಾ ಬಾ ಮುಂದೆ,’ ಅಂತ ಕರೆದರು.

Hassan: ಶಾಸಕ ಶಿವಲಿಂಗೇಗೌಡ ವೇದಿಕೆ ಮೇಲೆ ಕಾಣದಾದಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?
|

Updated on:Jun 27, 2023 | 5:53 PM

ಬೆಂಗಳೂರು: ಹಾಸನದಲ್ಲಿ ರಾಜ್ಯಮಟ್ಟದ ಕೆಂಪೇಗೌಡರ ಜಯಂತ್ಯುತ್ಸವ ನಡೆಯುತ್ತಿರುವುದರಿಂದ ತಾನು ಬೆಂಗಳೂರಲ್ಲಿ ಅಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದೆ ಹಾಸನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಕಾರ್ಯಕ್ರಮದಲ್ಲಿ ಮಾತಾಡಿದ ಮುಖ್ಯಮಂತ್ರಿ, ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರನ್ನು (MLA KM Shivalingegowda) ಅಭಿನಂದಿಸಿದರು. ಸಿದ್ದರಾಮಯ್ಯ ಶಿವಲಿಂಗೇಗೌಡರ ಹೆಸರು ಹೇಳುವಾಗ ಅವರು ವೇದಿಕೆಯ ಮೇಲೆ ಆಸೀನರಾಗದೆ ಹಿಂಭಾಗದಲ್ಲಿ ನಿಂತಿದ್ದರು. ಅದನ್ನು ಗಮನಿಸಿದ ಸಿಎಂ, ‘ಅಲ್ಯಾಕಯ್ಯ ನಿಂತಿದ್ದೀಯಾ ಬಾ ಮುಂದೆ,’ ಅಂತ ಕರೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:53 pm, Tue, 27 June 23

Follow us