AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ರಾಹಿಂಗೆ ತಮ್ಮದೇ ಆದ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆ ಇದೆ: ಜಿಟಿ ದೇವೇಗೌಡ

ಇಬ್ರಾಹಿಂಗೆ ತಮ್ಮದೇ ಆದ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆ ಇದೆ: ಜಿಟಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2024 | 5:52 PM

ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಪಾರ್ಟಿಗಳ ನಾಯಕರನ್ನು ಇಬ್ರಾಹಿಂ ಅವರು ಚೆನ್ನಾಗಿ ಅರಿತಿದ್ದಾರೆ, ಹಾಗಾಗೇ ಅವರು ಈ ಪಕ್ಷಗಳ ಜೊತೆ ಕೈ ಜೋಡಿಸದೆ ತಮ್ಮದೇ ಆದ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆ ಮಾಡುತ್ತಿದ್ದಾರೆ, ಪಕ್ಷ ಕಟ್ಟಲು ಶಾಸಕರು ಬೇಕಿಲ್ಲ, ಜನ ಬೆಂಬಲ ಬೇಕು ಮತ್ತು ಅವರಿಗೆ ಉತ್ತಮ ಯೋಜನೆಗಳನ್ನು ನೀಡಬೇಕೆಂದು ಜಿಟಿ ದೇವೇಗೌಡ ಹೇಳಿದರು.

ಮೈಸೂರು: ಇಂದು ಜಿಟಿ ದೇವೇಗೌಡರಿಗೆ ಹುಟ್ಟುಹಬ್ಬ ಸಂಭ್ರಮ, ಇದೇ ಹಿನ್ನೆಲೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಸಿಎಂ ಇಬ್ರಾಹಿಂ ಮನೆವರೆಗೆ ಬಂದು ಗೌಡರಿಗೆ ಶಾಲು ಹೊದಿಸಿ, ಹೂಹಾರ ಹಾಕಿ ವಿಶ್ ಮಾಡಿದ್ದಾರೆ. ಪ್ರತಿವರ್ಷ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ರಾಹಿಂ ವಿಶ್ ಮಾಡುತ್ತಾರೆ ಎಂದು ಗೌಡರು ಹೇಳಿದರು. ವಕ್ಫ್ ರೈತರಿಗೆ ನೋಟೀಸ್ ಗಳನ್ನು ನೀಡಿರುವ ಬಗ್ಗೆ ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತಾಡಿದ್ದು ಯಾವುದೇ ರೈತನ ಜಮೀನಿಗೆ ತೊಂದರೆಯಾಗದಂತೆ ಮತ್ತು ವಕ್ಫ್ ಬೋರ್ಡ್ ನವರಿಗೆ ರೈತರ ಜಮೀನಿನ ಬದಲು ಪರಿಹಾರ ನೀಡಬೇಕೆಂದು ಹೇಳಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ಡೆಮಾಲಿಷ್ ಮಾಡ್ತಿದ್ದಾರೆ: ಜಿಟಿ ದೇವೇಗೌಡ ವಾಗ್ದಾಳಿ