ಕುಮಾರಸ್ವಾಮಿ ತಾನು ಸಿಎಂ ಆಗಿ ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಮತ ಕೇಳಲಿಲ್ಲ: ಸೋಮಶೇಖರ್
ಕುಮಾರಸ್ವಾಮಿಗೆ ತದ್ವಿರುದ್ಧವಾಗಿ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ, ಕೆರೆಗಳನ್ನು ತುಂಬಿಸಿದ ಬಗ್ಗೆ ಮಾತಾಡುತ್ತಾ ಮತ ಕೇಳಿದರು ಎಂದು ಹೇಳಿದ ಸೋಮಶೇಖರ್, ಶಿಗ್ಗಾವಿ ಮತ್ತು ಸಂಡೂರಲ್ಲಿ ನಡೆದ ಉಪ ಚುನಾವಣೆಗಳ ವಿಷಯದಲ್ಲಿ ತನಗೆ ಹೆಚ್ಚು ಗೊತ್ತಿಲ್ಲ ಎಂದು ಹೇಳಿದರು.
ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ಕ್ಷೇತ್ರದ ಶಾಸಕರಾಗಿ ಮತ್ತು ಮುಖ್ಯಮಂತ್ರಿಯಾಗಿ ಮಾಡಿd ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮತ ಕೇಳದೆ ಮುಡಾ ಪ್ರಕರಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೆಳಗಿಳಿಸುತ್ತೇನೆ ಎಂಬ ಮಾತುಗಳನ್ನು ಹೇಳುತ್ತಾ ಮತ ಕೇಳಿದರು. ಮಾಜಿ ಪ್ರಧಾನಿ ದೇವೇಗೌಡರು ಸಹ ಶಿವಕುಮಾರ್ ಅವರ 40 ವರ್ಷ ಹಿಂದಿನ ಇತಿಹಾಸ ಕೆದಕುತ್ತಾ ಅವರೊಬ್ಬ ರೌಡಿ ಎಂದು ಹೇಳಿದರು. ಅವರ ಈ ಮಾತುಗಳೇ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವಾದವು ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯೋಗೇಶ್ವರ್ಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ, ಚನ್ನಪಟ್ಟಣ ನನ್ನ ಹುಟ್ಟೂರು: ಸೋಮಶೇಖರ್
Follow Us
Latest Videos

