AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೀಡಾ ಇಲಾಖೆಯ ಜಡತ್ವ ಕಂಡು ದಿಗಿಲುಗೊಂಡ ಸಿಎಂ ಸಿದ್ದರಾಮಯ್ಯರಿಂದ ಅಧಿಕಾರಿಗಳ ತರಾಟೆ

ಕ್ರೀಡಾ ಇಲಾಖೆಯ ಜಡತ್ವ ಕಂಡು ದಿಗಿಲುಗೊಂಡ ಸಿಎಂ ಸಿದ್ದರಾಮಯ್ಯರಿಂದ ಅಧಿಕಾರಿಗಳ ತರಾಟೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 05, 2025 | 8:04 PM

ಕ್ರೀಡಾಪಟುಗಳನ್ನು ಬೆಳೆಸುವುದು ತಮ್ಮ ಸರ್ಕಾರದ ಗುರಿಯಾಗಿದೆ, ಅವರಿಗೆ ಕ್ರೀಡಾ ಹಾಸ್ಟೆಲ್​ಗಳಲ್ಲಿ ಅಗತ್ಯವಿರುವಷ್ಟು ಪೌಷ್ಠಿಕ ಮತ್ತು ಪ್ರೊಟೀನ್ ಯುಕ್ತ ಆಹಾರ ನಿಯಮಿತವಾಗಿ ಸಿಗುತ್ತಿದೆಯೋ ಇಲ್ಲವೋ ಅಂತ ಮೇಲಿಂದ ಮೇಲೆ ಚೆಕ್ ಮಾಡಬೇಕು. ಪ್ರತಿ ಜಿಲ್ಲೆಗೊಬ್ಬ ಉಪ ನಿರ್ದೇಶಕನನ್ನು ನೇಮಕ ಮಾಡಿ ವ್ಯವಸ್ಥೆಯಲ್ಲಿರುವ ಲೋಪದೋಶಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಂಗಳೂರು, ಮೇ 5: ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಭಿಮಾನಿ, ಆದರೆ ರಾಜ್ಯದಲ್ಲಿ ಕ್ರೀಡೆ ನೀರಿಕ್ಷಿತ ಪ್ರಗತಿ ಸಾಧಿಸದಿರುವುದು ಅವರಿಗೆ ಚಿಂತೆಯನ್ನುಂಟು ಮಾಡಿದೆ. ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ (Youth Empowerment and Sports Department) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ಕೇಳಿದ ಪ್ರಶ್ನೆಗಳು ಪ್ರಶ್ನೆಯಾಗೇ ಉಳಿದವು. ಪತ್ಯೇಕವಾದ ಕ್ರೀಡಾ ಪ್ರಾಧಿಕಾರ ಸ್ಥಾಪಿಸವಾಗಿದ್ದರೂ ಯಾಕೆ ಕ್ರೀಡಾ ಸಾಧನೆಗಳಲ್ಲಿ ಸುಧಾರಣೆ ಇಲ್ಲ, ಯಾಕೆ 176 ತರಬೇತುದಾರರು ಮತ್ತು ಕೋಚ್ ನೇಮಕಾತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕರೂ ನೇಮಕಾತಿ ಅಗಿಲ್ಲ? ಎಂದು ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ದಸರಾ ಕ್ರೀಡಾಕೂಟ ಸಮಯದವರೆಗೆ ಕ್ರೀಡೆಗಳ ಎಲ್ಲ ಆಯಾಮಗಳಲ್ಲಿ ಪ್ರಗತಿ ಕಾಣಬೇಕು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ: ಪೋಸ್ಟ್ ಹಾಕಿದ್ದ ಹೋಂ ಗಾರ್ಡ್​ ಅರೆಸ್ಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ