AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬ್ಲ್ಯೂಪಿಎಲ್ ಗೆದ್ದಿರುವ ಸ್ಮೃತಿ ಮಂದಾನ ನೇತೃತ್ವದ ಆರ್​ಸಿಬಿ ತಂಡವನ್ನು ಟ್ವೀಟ್ ಮೂಲಕ ಅಭಿನಂದಿಸಿದ ಸಿದ್ದರಾಮಯ್ಯ

ಡಬ್ಲ್ಯೂಪಿಎಲ್ ಗೆದ್ದಿರುವ ಸ್ಮೃತಿ ಮಂದಾನ ನೇತೃತ್ವದ ಆರ್​ಸಿಬಿ ತಂಡವನ್ನು ಟ್ವೀಟ್ ಮೂಲಕ ಅಭಿನಂದಿಸಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 18, 2024 | 11:12 AM

Share

ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಟೀಮನ್ನು ಅಭಿನಂದಿಸಿರುವ ಅವರು ಕ್ರಿಕೆಟ್ ಪ್ರೇಮಿಯಾದ ತಮಗೆ ಹುಡುಗಿಯರು ನೀಡಿದ ಸಂಘಟಿತ ಪ್ರದರ್ಶನ ಮತ್ತು ಫೈನಲ್ ನಲ್ಲಿ ದೆಹಲಿ ತಂಡವನ್ನು ಮಣಿಸಿದ್ದು ಬಹಳ ಸಂತಸ ತಂದಿದೆ. ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಹುಡುಗರೂ ಈ ಬಾರಿ ಗೆಲ್ಲಲಿ ಅಂತ ಹಾರೈಸಿರುವ ಸಿದ್ದರಾಮಯ್ಯ ಸಹ ‘ಈ ಸಲ ಕಪ್ ನಮ್ದೆ’ ಎಂದಿದ್ದಾರೆ.

ಬೆಂಗಳೂರು: ಏಳು ಕೋಟಿ ಕನ್ನಡಿಗರ ಮಾರ್ಚ್ 17 ರ ಸಂಡೇಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮಹಿಳಾ ತಂಡ ಸೂಪರ್ ಸಂಡೇ ಆಗಿ ಪರಿವರ್ತಿಸಿತು ಅನ್ನೋದರಲ್ಲಿ ಅನುಮಾನವಿಲ್ಲ. ನಿನ್ನೆ ರಾತ್ರಿ ದೆಹಲಿಯಲ್ಲಿ ಕನ್ನಡತಿ ಸ್ಮೃತಿ ಮಂದಾನ (Smriti Mandana) ನೇತೃತ್ವದ ಆರ್ ಸಿಬಿ ಟೀಮ್ ಡಿಸಿಯನ್ನು 8 ವಿಕೆಟ್ ಗಳಿಂದ ಸೋಲಿಸಿ ಡಬ್ಲ್ಯೂಪಿಎಲ್ (WPL) ಪ್ರಶಸ್ತಿ ಗೆದ್ದುಕೊಂಡಿದ್ದು ಕನ್ನಡಿಗರಲ್ಲಿ ಸಂಭ್ರಮ ಉಂಟುಮಾಡಿದೆ. ಪ್ರತಿಸಲ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ ಶುರುವಾದಾಗ ಎಲ್ಲ ಕನ್ನಡಿಗರು ಈ ಸಲ ಕಪ್ ನಮ್ದೆ ಅನ್ನುತ್ತಿದ್ದರಾದರೂ ಆಸೆ ಮತ್ತು ನಿರೀಕ್ಷೆ ಕೈಗೂಡಿರಲಿಲ್ಲ. ಹುಡುಗರಿಂದ ಮಾಡಲಾಗದ್ದನ್ನು ನಮ್ಮ ಹುಡುಗಿಯರು ಮಾಡಿದ್ದಾರೆ. ತಂಡವನ್ನು ಅಭಿನಂದಿಸುವಲ್ಲಿಯೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಕನ್ನಡಿಗರ ನೇತೃತ್ವವಹಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ಟೀಮನ್ನು ಅಭಿನಂದಿಸಿರುವ ಅವರು ಕ್ರಿಕೆಟ್ ಪ್ರೇಮಿಯಾದ ತಮಗೆ ಹುಡುಗಿಯರು ನೀಡಿದ ಸಂಘಟಿತ ಪ್ರದರ್ಶನ ಮತ್ತು ಫೈನಲ್ ನಲ್ಲಿ ದೆಹಲಿ ತಂಡವನ್ನು ಮಣಿಸಿದ್ದು ಬಹಳ ಸಂತಸ ತಂದಿದೆ. ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಹುಡುಗರೂ ಈ ಬಾರಿ ಗೆಲ್ಲಲಿ ಅಂತ ಹಾರೈಸಿರುವ ಸಿದ್ದರಾಮಯ್ಯ ಸಹ ‘ಈ ಸಲ ಕಪ್ ನಮ್ದೆ’ ಎಂದಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯದುವೀರ್ ಒಡೆಯರ್ ವಿರುದ್ಧ ಟೀಕಿಸದಂತೆ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.