ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲು ಕಲಬುರಗಿಗೆ ಪ್ರಯಾಣ ಬೆಳೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ದೊಡ್ಡ ಬೆಂಗಾವಲು ಪಡೆ!
ಮುಖ್ಯಮಂತ್ರಿಯ ಕಾನ್ವಾಯ್ ರಸ್ತೆ ಮೇಲೆ ಹೊರಟರೆ ಇತರ ವಾಹನಗಳು ಸ್ತಬ್ಧಗೊಳ್ಳುತ್ತವೆ. ದಾಖಲೆಯ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಖರ್ಚಾಗುವ ಇಂಧನದ ಬಗ್ಗೆ ಯೋಚಿಸುವುದಿಲ್ಲವೇ?
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಜ್ಯೋತಿ ಯೋಜನೆಗೆ (Gruha Jyoti scheme) ಇಂದು ಕಲಬುರಗಿಯಲ್ಲಿ ಚಾಲನೆ ಸಿಗಲಿದೆ ಮತ್ತು ಅದೇ ಕಾರ್ಯಕ್ಕಾಗಿ ಮುಖ್ಯಮಂತ್ರಿ ಬೆಳಗ್ಗೆ ಪ್ರಯಾಣ ಬೆಳೆಸಿದರು. ನಾವು ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಹೋಗುವ ದೊಡ್ಡ ಬೆಂಗಾವಲು ಪಡೆ (ಕಾನ್ವಾಯ್) (convoy) ಬಗ್ಗೆ ವರದಿ ಮಾಡಿದ್ದೇವೆ. ಮುಖ್ಯಮಂತ್ರಿ ತಮ್ಮ ನಿವಾಸದಿಂದ ಹೊರಬಿದ್ದ ತಕ್ಷಣ 15-20 ವಾಹನಗಳು ಅವರನ್ನು ಹಿಂಬಾಲಿಸುವ ಅವಶ್ಯಕತೆಯಿದೆಯೇ? ವಿಡಿಯೋ ನೋಡಿ. ಸಿದ್ದರಾಮಯ್ಯ ಕಲಬುರಗಿ ಪ್ರಯಾಣ ನಿಮಿತ್ತ ಹೆಚ್ ಎಎಲ್ ಏರ್ಪೋರ್ಟ್ ಗೆ ಹೊರಟಾಗ ಒಂದರ ಹಿಂದೆ ಒಂದರಂತೆ ಸಾಲು ಸಾಲು ವಾಹನಗಳು ಅವರ ಕಾರಿನ ಹಿಂದೆ ಹೋಗುತ್ತವೆ. ಅಧಿಕಾರಿಗಳಿಗೊಂದು, ಭದ್ರತಾ ಸಿಬ್ಬಂದಿಗೊಂದು-ಎರಡು ಕಾರು ಸಾಕಾಗಲ್ವಾ? ಮುಖ್ಯಮಂತ್ರಿಯ ಕಾನ್ವಾಯ್ ರಸ್ತೆ ಮೇಲೆ ಹೊರಟರೆ ಇತರ ವಾಹನಗಳು ಸ್ತಬ್ಧಗೊಳ್ಳುತ್ತವೆ. ದಾಖಲೆಯ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಖರ್ಚಾಗುವ ಇಂಧನದ ಬಗ್ಗೆ ಯೋಚಿಸುವುದಿಲ್ಲವೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಫ್ರೀಡಂಪಾರ್ಕ್ನಲ್ಲಿ ಜೆಡಿಎಸ್ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
