ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿಯಲ್ಲಿ 12 ಮಹಿಳೆಯರಿರುವುದನ್ನು ಕೇಳಿ ಸಂತೋಷಪಟ್ಟ ಸಿದ್ದರಾಮಯ್ಯ
ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯ ಸಿಗಬೇಕು ಅಂತ ಡಾ ಬಿಆರ್ ಅಂಬೇಡ್ಕರ್ ಬಯಸಿದ್ದರು ಮತ್ತು ಸರ್ವೋಚ್ಛ ನ್ಯಾಯಾಲಯ ಅದನ್ನೇ ಬಯಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ಏಪ್ರಿಲ್ 29: ಹಿಂದೊಮ್ಮೆ ಲಾಯರ್ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಂಗಳೂರು ವಕೀಲರ ಸಂಘದ (Bengaluru Bar Association) ವಾರ್ಷಿಕ ದಿನಾಚರಣೆಯಲ್ಲಿ ಭಾಗಿಯಾಗಿ ಹಲವಾರು ವಿಷಯಗಳನ್ನು ಮಾತಾಡಿದರು. ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ, ವಕೀಲರ ಸಂಘದಲ್ಲಿ ಶೇಕಡ 30 ರಷ್ಟು ಮಹಿಳೆಯರು ಇರಬೇಕು ಎಂದು ಸುಪ್ರೀಮ್ ಕೋರ್ಟ್ ಆದೇಶ ಹೊರಡಿಸಿತ್ತು ಎನ್ನುತ್ತ ತಮ್ಮ ಹಿಂದೆ ಕೂತಿದ್ದ ವಕೀಲೆಯರ ಕಡೆ ನೋಡಿದಾಗ ಶ್ವೇತಾ ಹೆಸರಿನ ವಕೀಲೆ ಇಲ್ಲಿನ ಕಾರ್ಯಕಾರಿಣಿ ಸಮಿತಿಯಲ್ಲಿ 12 ಜನ ಮಹಿಳಾ ಸದಸ್ಯರಿದ್ದಾರೆ ಎನ್ನುತ್ತಾರೆ. ಅದನ್ನೇ ಸಿಎಂ ನಗುತ್ತಾ ಘೋಷಿಸಿದಾಗ ನೆರೆದಿದ್ದ ವಕೀಲರು ಮತ್ತು ಜನ ಶಿಳ್ಳೆ ಹೊಡೆದು ಚಪ್ಪಾಳೆ ಬಾರಿಸುತ್ತ ಅವರ ಮಾತನ್ನು ಸ್ವಾಗತಿಸುತ್ತಾರೆ.
ಇದನ್ನೂ ಓದಿ: ಭಾರತೀಯರು ಶಾಂತಿಪ್ರಿಯರು ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ: ಹೆಚ್ಕೆ ಪಾಟೀಲ್, ಸಚಿವ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ