AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM Siddaramaiah: ಕಾಣದ ರಿಜಿಸ್ಟರ್ ಗಾಗಿ ಸಭಾಧ್ಯಕ್ಷರ ಆಸನದ ಸುತ್ತ ಪ್ರದಕ್ಷಿಣೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

CM Siddaramaiah: ಕಾಣದ ರಿಜಿಸ್ಟರ್ ಗಾಗಿ ಸಭಾಧ್ಯಕ್ಷರ ಆಸನದ ಸುತ್ತ ಪ್ರದಕ್ಷಿಣೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2023 | 2:52 PM

Share

ಮುಖ್ಯಮಂತ್ರಿಗಳು ಸ್ಪೀಕರ್ ಕೈಕುಲುಕಿ ಅವರ ಆಸನದ ಸುತ್ತ ತಿರುಗಿ ಪುನಃ ಮುಂಭಾಗಕ್ಕೆ ಬರುತ್ತಾರೆ. ಸಹಿ ಮಾಡಲು ರಿಜಿಸ್ಟರ್ ಎಲ್ಲೂ ಕಾಣಿಸುವುದಿಲ್ಲ!

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಹದಿನಾರನೇ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ (Siddaramaiah) ಇಂದು ವರುಣಾ ಕ್ಷೇತ್ರದ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ ನಿಗದಿತ ಪುಸ್ತಕದಲ್ಲಿ (specified register) ಸಹಿ ಮಾಡಲು ಆಗಮಿಸಿದಾಗ ಅವರ ಹಿಂಭಾಗದಲ್ಲಿದ್ದ ಆಸಗಳಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಮಾಜಿ ಸಚಿವ ಆರ್ ಅಶೋಕ (R Ashoka) ಯಾರದ್ದೋ ಕಡೆ ಕೈಮಾಡುತ್ತಾ ನಗುತ್ತಿರುತ್ತಾರೆ. ಒಮ್ಮೆ ಸಹಿ ಮಾಡಿದ ಬಳಿಕ ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಸಹಿ ಎಲ್ಲ ಮಾಡಬೇಕು ಅಂತ ಕೇಳುತ್ತಾರೆ. ವಂದಿತಾ ಏನನ್ನೋ ಹೇಳುತ್ತಾ, ಸಭಾಧ್ಯಕ್ಷರ ಕಡೆ ಕೈತೋರುತ್ತಾರೆ. ಪಾಪ, ಮುಖ್ಯಮಂತ್ರಿಗಳು ಸ್ಪೀಕರ್ ಕೈಕುಲುಕಿ ಅವರ ಆಸನದ ಸುತ್ತ ತಿರುಗಿ ಪುನಃ ಮುಂಭಾಗಕ್ಕೆ ಬರುತ್ತಾರೆ. ಸಹಿ ಮಾಡಲು ರಿಜಿಸ್ಟರ್ ಎಲ್ಲೂ ಕಾಣಿಸುವುದಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ