ರವಿಚಂದ್ರನ್ ಪುತ್ರರ ಬಗ್ಗೆ ಕಾಕ್ರೋಚ್ ಸುಧಿ ವಿಶೇಷ ಮಾತು; ‘ಕನಸುಗಾರ’ ನೆನಪಿಸಿದ ಮನು-ವಿಕ್ರಮ್
ಭರತ್ ನಾವುಂದ ನಿರ್ದೇಶನ ಮಾಡಿರುವ ‘ಮುಗಿಲ್ಪೇಟೆ’ ಚಿತ್ರದಲ್ಲಿ ಮನು ರವಿಚಂದ್ರನ್ಗೆ ಜೋಡಿಯಾಗಿ ಖಯಾದು ಲೋಹರ್ ನಟಿಸಿದ್ದಾರೆ. ಕಾಕ್ರೋಚ್ ಸುಧಿಗೆ ವಿಲನ್ ಪಾತ್ರವಿದೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ನಟಿಸಿರುವ ‘ಮುಗಿಲ್ಪೇಟೆ’ ಚಿತ್ರತಂಡ ರಿಲೀಸ್ ದಿನಾಂಕ ಘೋಷಿಸಿದೆ. ನ.19ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ‘ಟಗರು’ ಖ್ಯಾತಿಯ ನಟ ಕಾಕ್ರೋಚ್ ಸುಧಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮನು ಸಲುವಾಗಿ ಅವರ ಸಹೋದರ ವಿಕ್ರಮ್ ರವಿಚಂದ್ರನ್ ಸಾಕಷ್ಟು ಶ್ರಮಪಡುತ್ತಿದ್ದಾರೆ. ಅದನ್ನು ನೋಡಿದ ಸುಧಿ ಅವರು ‘ಕನಸುಗಾರ’ ಸಿನಿಮಾದ ಪಾತ್ರಗಳನ್ನು ನೆನಪಿಸಿಕೊಂಡರು.
ಭರತ್ ನಾವುಂದ ನಿರ್ದೇಶನ ಮಾಡಿರುವ ‘ಮುಗಿಲ್ಪೇಟೆ’ ಚಿತ್ರದಲ್ಲಿ ಮನುಗೆ ಜೋಡಿಯಾಗಿ ಖಯಾದು ಲೋಹರ್ ನಟಿಸಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಕಾವ್ಯಾ ಶಾ, ತಾರಾ ಅನುರಾಧ ಮುಂತಾದವರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. 17 ಗೆಟಪ್ಗಳಲ್ಲಿ ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ರಕ್ಷಾ ವಿಜಯ್ ಕುಮಾರ್ ಮತ್ತು ಮೋತಿ ಮಹೇಶ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:
‘ಸಲಗ’ ಚಿತ್ರದ ಸಾವಿತ್ರಿ-ಚಿನ್ನು ಲವ್ಸ್ಟೋರಿ ಬಗ್ಗೆ ಕಾಕ್ರೋಚ್ ಸುಧಿ ಫನ್ನಿ ಮಾತುಕತೆ
‘ಮೆಗಾ ಸ್ಟಾರ್’ ಚಿರಂಜೀವಿ ಮತ್ತು ರವಿಚಂದ್ರನ್ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು
Published On - 9:59 am, Tue, 26 October 21