AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ಜನರನ್ನು ಬಲಿಪಡೆದ ಬಾಬುಸಾಪಾಳ್ಯ ಕಟ್ಟಡದ ಸ್ಥಿತಿ ಈಗ ಹೇಗಿದೆ ಅಂತ ನೋಡಿ

ಎಂಟು ಜನರನ್ನು ಬಲಿಪಡೆದ ಬಾಬುಸಾಪಾಳ್ಯ ಕಟ್ಟಡದ ಸ್ಥಿತಿ ಈಗ ಹೇಗಿದೆ ಅಂತ ನೋಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 24, 2024 | 10:31 AM

ನಾವು ಈಗಾಗಲೇ ವರದಿ ಮಾಡಿರುವಂತೆ ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರನನ್ನು ಹೆಣ್ಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳನ್ನು ವಿರುದ್ಧ ಕಠಿಣ ಕ್ರಮ ಜರುಗಿಸಿದರೂ ನಗರದಲ್ಲಿ ಇಂಥ ದುರಂತಗಳು ಕೊನೆಯಾಗುವ ನಿರೀಕ್ಷೆ ಇಲ್ಲ.

ಬೆಂಗಳೂರು: ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಎರಡು ದಿನಗಳಾಯಿತು. ಕುಸಿದ ಕಟ್ಟಡದ ಅವಶೇಷಗಳನ್ನು ಇಲ್ಲಿ ನೋಡಬಹುದು. ಈ ದುರಂತದಲ್ಲಿ 8 ಜನ ಸಾವಿಗೀಡಾಗಿದ್ದಾರೆ. ಯಾರಿಗ್ಗೊತ್ತು ಅವಶೇಷಗಳನ್ನು ಸರಿಸುವಾಗ ಮತ್ತಷ್ಟು ಮೃತದೇಹಗಳು ಪತ್ತೆಯಾದರೆ ಆಶ್ಚರ್ಯವಿಲ್ಲ. ನಾಲ್ಕು ಅಂತಸ್ತಿನ ಕಟ್ಟಡದ ಅನುಮತಿ ಪಡೆದಿದ್ದ ಮಾಲೀಕ ಆರು ಅಂತಸ್ತುಗಳನ್ನು ಕಟ್ಟಲಾರಂಭಿಸಿದ್ದು ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಾಬುಸಾಬ್​ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣ: ಕರ್ತವ್ಯಲೋಪ ಹಿನ್ನೆಲೆ ಬಿಬಿಎಂಪಿ ಅಧಿಕಾರಿ ಅಮಾನತು