ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದರೆ ಯಾವ ಸಮಾಜಕ್ಕೂ ಅನ್ಯಾಯವಾಗಲಾರದು: ವೆಂಕಟರಾವ್ ನಾಡಗೌಡ
ಎಲ್ಲರೂ ಪಕ್ಷಭೇದ ಮರೆತು, ರಾಜಕೀಯ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಒಟ್ಟಾಗಿ ಹೋರಾಟ ಮಾಡಿದರೆ ಯಾರಪ್ಪನಿಂದಲೂ ಸಮಾಜಗಳಿಗೆ ಅನ್ಯಾಯವಾಗುವುದು ಸಾಧ್ಯವಿಲ್ಲ ಎಂದು ನಾಡಗೌಡ ಹೇಳಿದರು. ಸಭೆಗೆ ಶಾಸಕರು ಬರಬೇಕಿತ್ತು, ಅವರು ತಮ್ಮ ರಾಜಕೀಯ ಭವಿಷ್ಯ ನೆನೆದು ಹಿಂದೆ ಸರಿದಿರಬಹುದು, ಅದರೆ ಇಬ್ಬರು ಎಮ್ಮೆಲ್ಸಿಗಳು ಯಾವುದೇ ಹೆದರಿಕೆ ಇಲ್ಲದೆ ಬಂದಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ರಾಯಚೂರು, ಏಪ್ರಿಲ್ 29: ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ನಡೆಯುವ ಮೊದಲ ರಾಜ್ಯದಾದ್ಯಂತ ಜಾತಿ ಗಣತಿ ಮತ್ತು ಬಿಜೆಪಿಯ ಜನಾಕ್ರೋಶ ಯಾತ್ರೆ ಬಗ್ಗೆ ಚರ್ಚೆ ನಡೆಯುತಿತ್ತು. ರಾಯಚೂರುನಲ್ಲಿ ಮಾಜಿ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ (Venkat Rao Nadagouda) ಜಾತಿ ಗಣತಿ ಸಮೀಕ್ಷೆ ಹಿನ್ನೆಲೆಯಲ್ಲಿ ಎಲ್ಲ ಸಮಾಜದವರು ಒಂದಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಹೇಳಿದರು. ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಸಮಾಜಕ್ಕಾಗಿ ಹೋರಾಡಿದರೆ ಮಾತ್ರ ಜನ ಅಂದುಕೊಳ್ಳುವುದನ್ನು ಪಡೆಯಲು ಮತ್ತು ನಾವು ಪ್ರತಿನಿಧಿಸುವ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದ ಅವರು ಅಧಿಕಾರದಲ್ಲಿರುವವರು ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರುವ ಅಂಶವನ್ನು ಮರೆಯಬಾರದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಎಲ್ಲ ಸಮಾಜದವರಿಗೆ ಇದೆ ಎಂದು ಮಾಜಿ ಶಾಸಕ ಹೇಳಿದರು.
ಇದನ್ನೂ ಓದಿ: 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ