AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls; ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಬೋವಿ ಸಮಾಜಕ್ಕೆ ಅನ್ಯಾಯವಾಗಿದೆ: ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ

Karnataka Assembly Polls; ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಬೋವಿ ಸಮಾಜಕ್ಕೆ ಅನ್ಯಾಯವಾಗಿದೆ: ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 07, 2023 | 2:45 PM

Share

ಮೂರನೇ ಪಟ್ಟಿಯಲ್ಲಾದರೂ ಸಮಾಜದ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಲು ಬಂದಿರುವ ಸ್ವಾಮೀಜಿ, ಸಿದ್ದರಾಮಯ್ಯರನ್ನು ಸಾಮಾಜಿಕ ನ್ಯಾಯದ ಹರಿಕಾರ ಅಂತ ಕೊಂಡಾಡುತ್ತಾರೆ.

ಬೆಂಗಳೂರು: ಚುನಾವಣೆ ಯಾವುದೇ ಆಗಿರಲಿ, ಟಿಕೆಟ್ ಹಂಚುವ ಕೆಲಸ ಬಹಳ ತ್ರಾಸದಾಯಕ ಮತ್ತು ಜಟಿಲ. ಈಗೆಲ್ಲ ಜಾತಿ-ಧರ್ಮ-ಸಮುದಾಯಗಳ ಆಧಾರದಲ್ಲಿ ಪಕ್ಷದ ನಾಯಕರು ಟಿಕೆಟ್ ಹಂಚಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಯಾವ ಸಮುದಾಯವನ್ನೂ (community) ಕಡೆಗಣಿಸುವಂತಿಲ್ಲ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯರನ್ನು (Siddaramaiah) ಕಾಣಲು ಬಂದಿರುವ ಇವರು ಬೋವಿ ಸಮಾಜದ ಶ್ರೀಗಳಾಗಿರುವ ಸಿದ್ದರಾಮೇಶ್ವರ ಸ್ವಾಮೀಜಿಯವರು (Siddarameshwara Swamiji). ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದರೂ ತಮ್ಮ ಸಮಾಜಕ್ಕೆ ಸೂಕ್ತವಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಮೂರನೇ ಪಟ್ಟಿಯಲ್ಲಾದರೂ ಸಮಾಜದ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಲು ಬಂದಿರುವ ಸ್ವಾಮೀಜಿ, ಸಿದ್ದರಾಮಯ್ಯರನ್ನು ಸಾಮಾಜಿಕ ನ್ಯಾಯದ ಹರಿಕಾರ ಅಂತ ಕೊಂಡಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ