ಬಿಜೆಪಿ ಶಾಸಕರ ವಿರುದ್ಧ ವನ್ ಮ್ಯಾನ್ ಆರ್ಮಿಯಂತೆ ಕೂಗಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಪ್ರದೀಪ್ ಈಶ್ವರ್ ಜನಪ್ರಿಯ ನಾಯಕ ಮತ್ತು ಶಾಸಕ ಅನ್ನೋದರಲ್ಲಿ ಅನುಮಾನವಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಹೆವಿವೇಟ್ ಡಾ ಕೆ ಸುಧಾಕರ್ ಅವರನ್ನು ಸೋಲಿಸಿದಾಗನಿಂದ ಅವರ ಖದರು ಬೇರೆಯಾಗಿದೆ. ಆದರೆ, ಪರಿಶ್ರಮ ಅಕಾಡೆಮಿಯಲ್ಲಿ ಅವರು ಟ್ಯೂಟರ್ ಆಗಿಯೂ ಕೆಲಸ ಮಾಡುವುದರಿಂದ ಸದನದಲ್ಲಿ ಒಂದೇ ಸಮ ಕಿರುಚಾಡುವುದು ಸೂಕ್ತವಲ್ಲ.

ಬಿಜೆಪಿ ಶಾಸಕರ ವಿರುದ್ಧ ವನ್ ಮ್ಯಾನ್ ಆರ್ಮಿಯಂತೆ ಕೂಗಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್
|

Updated on: Jul 19, 2024 | 3:16 PM

ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸದನದ ಹೊರಗೆ ಮತ್ತು ಒಳಗೆ ಆವೇಶದಲ್ಲಿ ಮಾತಾಡುತ್ತಾರೆ. ಬಿಜೆಪಿ ಶಾಸಕರು ಕಲಾಪ ನಡೆಯದಂತೆ ಒಂದೇ ಸಮನೆ ಪ್ರತಿಭಟನೆ ನಡೆಸುತ್ತಿದ್ದ ಕಾರಣ ರೊಚ್ಚಿಗೆದ್ದ ಅವರು ಬಿಜೆಪಿ ಆಡಳಿತಾವಧಿಯಲ್ಲಿ ಏನೆಲ್ಲ ಹಗರಣಗಳು ನಡೆದಿವೆ ಅಂತ ಒಂದು ಪಟ್ಟಿಯನ್ನು ಸದನದಲ್ಲಿ ಓದಿದರು. ಅವರು ಸಿಟ್ಟಿನಲ್ಲಿ ಅರೋಪ ಪಟ್ಟಿ ಓದುತ್ತಿದ್ದರೆ ಬಿಜೆಪಿ ಶಾಸಕರು ಘೋಷಣೆ ಕೂಗುವುದನ್ನು ಮುಂದುವರಿಸಿದರು. ಪಟ್ಟಿ ಓದುವುದನ್ನು ಮುಗಿಸದ ಬಳಿಕವೂ ಅವರು ಬಿಜೆಪಿ ಶಾಸಕರ ವಿರುದ್ಧ ಕೈ ಮಾಡಿ ಒಂದೇ ಸಮ ಏನನ್ನೋ ಹೇಳಿದರು. ಪ್ರಾಯಶಃ ಅವರ ಮೈಕ್ ಆಫ್ ಆಗಿತ್ತು ಅನಿಸುತ್ತೆ. ಹಾಗಾಗಿ ಏನು ಹೇಳುತ್ತಿದ್ದಾರೆ ಅಂತ ಕೇಳಿಸಲ್ಲ. ಸಭಾಧ್ಯಕ್ಷರು, ಈಶ್ವರ್ ನಿಲ್ಲಿಸಿ ಶರತ್ ಬಚ್ಚೇಗೌಡ ಮಾತಾಡುತ್ತಿದ್ದಾರೆ, ಅವರಿಗೆ ಮಾತಾಡಲು ಬಿಡಿಅ ಅಂತ ಹೇಳಿದರೂ ಈಶ್ವರ್ ಆವೇಶಕ್ಕೆ ಒಳಗಾದವರ ಹಾಗೆ ಕೂಗುವುದನ್ನು ಮುಂದುವರಿಸುತ್ತಾರೆ. ಕೊನೆಗೆ ಅವರ ಪಕ್ಷ ಪಕ್ಷದ ಇಬ್ಬರು ಸದಸ್ಯರು ಬಂದು ಸಮಾಧಾನಪಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವೇಗೌಡರ ಕುಟುಂಬಕ್ಕೆ ಮುಡಾದಿಂದ 48 ಸೈಟು ಹಂಚಿಕೆಯಾಗಿದೆ ಅಂತ ಯಡಿಯೂರಪ್ಪ ಹೇಳಿದ್ದರು: ಪ್ರದೀಪ್ ಈಶ್ವರ್

Follow us
ದರ್ಶನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ರಿಯಾಕ್ಷನ್
ದರ್ಶನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ರಿಯಾಕ್ಷನ್
ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ
ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಕೇಳುವುದರಲ್ಲಿ ತಪ್ಪಿಲ್ಲ: ಡಿಕೆ ಸುರೇಶ್​
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಕೇಳುವುದರಲ್ಲಿ ತಪ್ಪಿಲ್ಲ: ಡಿಕೆ ಸುರೇಶ್​
ಇದಪ್ಪ ಕ್ಯಾಚ್ ಅಂದ್ರೆ... ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಬಹುಪರಾಕ್
ಇದಪ್ಪ ಕ್ಯಾಚ್ ಅಂದ್ರೆ... ಕೈಲ್ ಮೇಯರ್ಸ್ ಫೀಲ್ಡಿಂಗ್​ಗೆ ಬಹುಪರಾಕ್
ನಮ್ಮ ಮೆಟ್ರೋ: ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರಬಂದ ತುಂಗಾ ಟಿಬಿಎಂ
ನಮ್ಮ ಮೆಟ್ರೋ: ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರಬಂದ ತುಂಗಾ ಟಿಬಿಎಂ
ರೇಣುಕಾ ಸ್ವಾಮಿ ಕೊಲೆ ಕೇಸ್; ದರ್ಶನ್ ವಿರುದ್ಧ ಇರೋ ಸಾಕ್ಷಿದಾರರು ಯಾರ್ಯಾರು?
ರೇಣುಕಾ ಸ್ವಾಮಿ ಕೊಲೆ ಕೇಸ್; ದರ್ಶನ್ ವಿರುದ್ಧ ಇರೋ ಸಾಕ್ಷಿದಾರರು ಯಾರ್ಯಾರು?
ಆ್ಯಪಲ್ ಐಫೋನ್ 15 ಪ್ಲಸ್ ಫ್ಲಿಪ್​ಕಾರ್ಟ್​ ₹13,601 ಡಿಸ್ಕೌಂಟ್ ಆಫರ್
ಆ್ಯಪಲ್ ಐಫೋನ್ 15 ಪ್ಲಸ್ ಫ್ಲಿಪ್​ಕಾರ್ಟ್​ ₹13,601 ಡಿಸ್ಕೌಂಟ್ ಆಫರ್
ಧಾರವಾಡ: ಸರ್ಕಾರಿ ಶಾಲಾ ಆವರಣದಲ್ಲಿ ಗುಂಡು ಪಾರ್ಟಿ!
ಧಾರವಾಡ: ಸರ್ಕಾರಿ ಶಾಲಾ ಆವರಣದಲ್ಲಿ ಗುಂಡು ಪಾರ್ಟಿ!
ಸಾವಿರಾರೂ ದೂರಿನ ಹಾರದೊಂದಿಗೆ ಕಲೆಕ್ಟರ್ ಕಚೇರಿಗೆ ಉರುಳಿಕೊಂಡು ಬಂದ ವ್ಯಕ್ತಿ
ಸಾವಿರಾರೂ ದೂರಿನ ಹಾರದೊಂದಿಗೆ ಕಲೆಕ್ಟರ್ ಕಚೇರಿಗೆ ಉರುಳಿಕೊಂಡು ಬಂದ ವ್ಯಕ್ತಿ
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಿಸಿದ ಪುನೀತ್ ಕೆರೆಹಳ್ಳಿ
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಿಸಿದ ಪುನೀತ್ ಕೆರೆಹಳ್ಳಿ