ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ನ್ಯಾಯಾಲಯ ನೀಡಿದ ತೀರ್ಪು ಸಮಸ್ತ ಹಿಂದೂಗಳಿಗೆ ಸಂದ ಜಯವಾಗಿದೆ: ಅರವಿಂದ್ ಬೆಲ್ಲದ್

ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಣಯದ ವಿರುದ್ಧ ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕಮಿಟಿಗೆ ಸಿದ್ದರಾಮಯ್ಯ ಸರ್ಕಾರದ ಕುಮ್ಮಕ್ಕಿತ್ತು. ನ್ಯಾಯಲಯವು, ಈದ್ಗಾ ಮೈದಾನ ಕಮಿಟಿಯ ಸ್ವತ್ತಲ್ಲ ಅದು ಪಾಲಿಕೆಗೆ ಸೇರಿದ ಆಸ್ತಿ, ಕಮಿಟಿ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ತೀರ್ಪು ನೀಡಿದೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ನ್ಯಾಯಾಲಯ ನೀಡಿದ ತೀರ್ಪು ಸಮಸ್ತ ಹಿಂದೂಗಳಿಗೆ ಸಂದ ಜಯವಾಗಿದೆ: ಅರವಿಂದ್ ಬೆಲ್ಲದ್
|

Updated on: Sep 15, 2023 | 5:22 PM

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮತ್ತು ಮೂರು ದಿನಗಳ ಉತ್ಸವ ಅಚರಣೆಗೆ ಅನುಮತಿ ನೀಡದಂತೆ ನಗರದ ಅಂಜುಮನ್ ಸಮಿತಿ (Anjuman committee) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಗಣೇಶ ಉತ್ಸವ (Ganesh Utsav) ಆಚರಿಸಲು ಅನುಮತಿಗಾಗಿ ಕಳೆದೆರಡು ದಿನಗಳಿಂದ ಪಾಲಿಕೆ ಮುಂದೆ ಧರಣಿ ನಡೆಸುತ್ತಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad), ಪಕ್ಷದ ಕಾರ್ಯಕರ್ತರು ಮತ್ತು ಹಿಂದೂ ಪರ ಸಂಘಟನೆಗಳ ಸದಸ್ಯರು ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ವಿಜಯೋತ್ಸವ ಆಚರಿಸಿದರು. ಟಿವಿ9 ಕನ್ನಡ ವಾಹಿನಿಯ ಹುಬ್ಬಳ್ಳಿ ವರದಿಗಾರನೊಂದಿಗೆ ಮಾತಾಡಿದ ಬೆಲ್ಲದ್, ಇದು ಎಲ್ಲ ಗಣಪತಿ ಭಕ್ತರಿಗೆ ಮತ್ತು ನಾಡಿನ ಜನತೆಗೆ ಸಂದ ಜಯವಾಗಿದೆ. ಕಳೆದ ವರ್ಷದಂತೆಯೇ ಮುಂದಿನ 5 ವರ್ಷಗಳ ಮೂರು-ದಿನ ಗಣೇಶನ ಉತ್ಸವ ಅಚರಿಸಲು ಅನುಮತಿ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಿರ್ಣಯದ ವಿರುದ್ಧ ಅಂಜುಮನ್ ಕಮಿಟಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕಮಿಟಿಗೆ ಸಿದ್ದರಾಮಯ್ಯ ಸರ್ಕಾರದ ಕುಮ್ಮಕ್ಕಿತ್ತು. ನ್ಯಾಯಲಯವು, ಈದ್ಗಾ ಮೈದಾನ ಕಮಿಟಿಯ ಸ್ವತ್ತಲ್ಲ ಅದು ಪಾಲಿಕೆಗೆ ಸೇರಿದ ಆಸ್ತಿ, ಕಮಿಟಿ ವರ್ಷಕ್ಕೆ ಎರಡು ಬಾರಿ ಅನುಮತಿ ಪಡೆದು ಪ್ರಾರ್ಥನೆ ಸಲ್ಲಿಸಬಹುದಷ್ಟೇ ಅಂತ ತೀರ್ಪು ನೀಡಿದೆ. ಮೈದಾನ ಉಪಯೋಗಿಸಲು ಯಾರಿಗೆ ಕೊಡಬೇಕು, ಯಾರಿಗೆ ನಿರಾಕರಿಸಬೇಕು ಅನ್ನೋದು ಪಾಲಿಕೆಯ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ ಎಂದು ನ್ಯಾಯಾಲಯ ಹೇಳಿರುವುದು ಸಮಸ್ತ ಹಿಂದೂಗಳಿಗೆ ದೊರೆತ ಜಯವಾಗಿದೆ ಎಂದು ಬೆಲ್ಲದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ