AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಾಲಯದಲ್ಲಿ ಅರಳಿ ಮತ್ತು ಬೇವಿನ ಮರವಿರುವುದರ ಹಿಂದಿನ ರಹಸ್ಯ ತಿಳಿಯಿರಿ

ದೇವಾಲಯದಲ್ಲಿ ಅರಳಿ ಮತ್ತು ಬೇವಿನ ಮರವಿರುವುದರ ಹಿಂದಿನ ರಹಸ್ಯ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on: Aug 30, 2025 | 6:53 AM

Share

ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅರಳಿಮರವು ಶ್ರೀಮನ್ ನಾರಾಯಣನ ಸ್ವರೂಪವಾಗಿಯೂ, ಬೇವಿನಮರವು ಶ್ರೀ ಮಹಾಲಕ್ಷ್ಮೀ ತಾಯಿಯ ಸ್ವರೂಪವಾಗಿಯೂ ಪರಿಗಣಿಸಲ್ಪಡುತ್ತದೆ. ಈ ಮರಗಳ ದರ್ಶನ ಮತ್ತು ಪೂಜೆಯು ಧಾರ್ಮಿಕ ಮತ್ತು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 30: ದೇವಾಲಯಗಳಲ್ಲಿ ಅರಳಿ ಮತ್ತು ಬೇವಿನ ಮರಗಳನ್ನು ಸಾಮಾನ್ಯವಾಗಿ ಕಾಣಬಹುದು. ಈ ಮರಗಳು ಕೇವಲ ನೆರಳು ಮತ್ತು ಸೌಂದರ್ಯವನ್ನು ಮಾತ್ರವಲ್ಲ, ಧಾರ್ಮಿಕ ಮಹತ್ವವನ್ನೂ ಹೊಂದಿವೆ. ಭಕ್ತಿಯ ಪ್ರಕಾರ, ಅರಳಿಮರವು ಶ್ರೀಮನ್ ನಾರಾಯಣನ ಸ್ವರೂಪವಾಗಿದ್ದರೆ, ಬೇವಿನಮರವು ಶ್ರೀ ಮಹಾಲಕ್ಷ್ಮೀ ತಾಯಿಯ ಸ್ವರೂಪವಾಗಿದೆ. ಅಶ್ವತ್ಥ ವೃಕ್ಷ (ಬೋಧಿವೃಕ್ಷ)ವು ವಿಶೇಷ ಮಹತ್ವವನ್ನು ಹೊಂದಿದ್ದು, ಶನಿ ದೋಷಗಳ ನಿವಾರಣೆಗೆ ಸಹಾಯಕವಾಗಿದೆ ಎಂದು ನಂಬಲಾಗಿದೆ.