Daily Devotional: ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು?
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೇಹಕ್ಕೆ ಆಹಾರ ಅತ್ಯಗತ್ಯ. ಆದರೆ ಕೆಲವರು ಸಿಹಿ ಇಷ್ಟಪಟ್ಟರೆ, ಮತ್ತೆ ಕೆಲವರು ಖಾರವನ್ನು ಹೆಚ್ಚು ಸೇವಿಸಲು ಬಯಸುತ್ತಾರೆ. ಈ ಆಹಾರದ ಆಯ್ಕೆಯು ಕೇವಲ ರುಚಿಯಲ್ಲ, ಬದಲಿಗೆ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ. ಸಿಹಿ ಪ್ರಿಯರಾಗಲು ಗುರು ಮತ್ತು ಶುಕ್ರ ಗ್ರಹಗಳ ಪ್ರಭಾವ ಮುಖ್ಯವಾಗಿರುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಾತ್ವಿಕ ಸ್ವಭಾವದವರು, ತಾಳ್ಮೆಯುಳ್ಳವರು, ನಿಧಾನವಾಗಿ ಮಾತನಾಡುವವರು ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು ಆಗಿರುತ್ತಾರೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೇಹಕ್ಕೆ ಆಹಾರ ಅತ್ಯಗತ್ಯ. ಆದರೆ ಕೆಲವರು ಸಿಹಿ ಇಷ್ಟಪಟ್ಟರೆ, ಮತ್ತೆ ಕೆಲವರು ಖಾರವನ್ನು ಹೆಚ್ಚು ಸೇವಿಸಲು ಬಯಸುತ್ತಾರೆ. ಈ ಆಹಾರದ ಆಯ್ಕೆಯು ಕೇವಲ ರುಚಿಯಲ್ಲ, ಬದಲಿಗೆ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ. ಸಿಹಿ ಪ್ರಿಯರಾಗಲು ಗುರು ಮತ್ತು ಶುಕ್ರ ಗ್ರಹಗಳ ಪ್ರಭಾವ ಮುಖ್ಯವಾಗಿರುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಾತ್ವಿಕ ಸ್ವಭಾವದವರು, ತಾಳ್ಮೆಯುಳ್ಳವರು, ನಿಧಾನವಾಗಿ ಮಾತನಾಡುವವರು ಮತ್ತು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವವರು ಆಗಿರುತ್ತಾರೆ.
ಇದೇ ರೀತಿ, ಖಾರವನ್ನು ಹೆಚ್ಚು ಇಷ್ಟಪಡುವವರ ಮೇಲೆ ಕುಜ ಮತ್ತು ರವಿ ಗ್ರಹಗಳ ಅನುಗ್ರಹ ಇರುತ್ತದೆ. ಇವರು ಶಕ್ತಿವಂತರು, ಧೈರ್ಯಶಾಲಿಗಳು ಮತ್ತು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ಆದರೆ ಕೆಲವೊಮ್ಮೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
