Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ

Updated on: Jun 07, 2025 | 7:08 AM

ಡಾ. ಬಸವರಾಜ್ ಗುರೂಜಿ ಅವರು ಕಷ್ಟಕಾಲದಲ್ಲಿ ಸಹಾಯ ಮಾಡುವುದರ ಮಹತ್ವವನ್ನು ಈ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಸಹಾಯ ಮಾಡುವುದು ಪವಿತ್ರ ಕಾರ್ಯವಾಗಿದ್ದು, ಅದರ ಫಲ ನಮಗೆ ಖಂಡಿತ ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಸಹಾಯವನ್ನು ಪ್ರಚಾರ ಮಾಡಿಕೊಳ್ಳಬಾರದು ಎಂಬುದು ಅವರ ಮುಖ್ಯ ಸಂದೇಶ.

ಬೆಂಗಳೂರು, ಜೂನ್​ 07: ಡಾ. ಬಸವರಾಜ್ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದರ ಮಹತ್ವವ ಬಗ್ಗೆ ಹೇಳಿದ್ದಾರೆ. ಸಹಾಯ ಎಂಬ ಪದದ ಪವಿತ್ರತೆಯನ್ನು ಒತ್ತಿ ಹೇಳುವ ಅವರು, ಸಹಾಯ ಮಾಡುವವರು ಭಗವಂತನ ಸ್ವರೂಪಗಳೆಂದು ವಿವರಿಸುತ್ತಾರೆ. ಆದರೆ, ಸಹಾಯವನ್ನು ಪ್ರಚಾರ ಮಾಡಿಕೊಳ್ಳುವುದರಿಂದ ಅದರ ಫಲ ನಮಗೆ ಸಿಗುವುದಿಲ್ಲ. ಶ್ರೀಕೃಷ್ಣ ಮತ್ತು ಅರ್ಜುನ, ದುರ್ಯೋಧನರ ಉದಾಹರಣೆಯ ಮೂಲಕ ಭಗವಂತನು ಯಾರಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ಅವರು ವಿವರಿಸಿದ್ದಾರೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More