Daily horoscope: ಬುಧ ಗ್ರಹ ಕರ್ಕಾಟಕ ರಾಶಿಗೆ ಪ್ರವೇಶ

Updated on: Jun 22, 2025 | 7:34 AM

ಜೂನ್ 22ರ ರಾಶಿ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಈ ದಿನ ರಾಹುಕಾಲ, ಶುಭಕಾಲದ ಸಮಯ, ಚಂದ್ರ ಮತ್ತು ರವಿಯ ಸಂಚಾರದ ಮಾಹಿತಿಯನ್ನು ನೀಡಲಾಗಿದೆ. ಬುಧ ಗ್ರಹ ಕರ್ಕಾಟಕ ರಾಶಿಯನ್ನು ಪ್ರವೇಶಿಸುವುದು ಮತ್ತು ವಿಶೇಷ ಆರಾಧನೆಗಳ ಮಾಹಿತಿ ಕೂಡ ಈ ಭವಿಷ್ಯದಲ್ಲಿ ಒಳಗೊಂಡಿದೆ.

ಬೆಂಗಳೂರು, ಜೂನ್​​ 22: ಇಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ರಾಹುಕಾಲ ಬೆಳಿಗ್ಗೆ 5:06 ರಿಂದ 6:46 ರವರೆಗೆ, ಶುಭ ಕಾಲ ಬೆಳಗ್ಗೆ 10:44 ರಿಂದ 12:21 ರವರೆಗೆ ಇರಲಿದೆ. ರವಿ ಮಿಥುನ ರಾಶಿಯಲ್ಲೂ ಮತ್ತು ಚಂದ್ರ ಮೇಷ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ಭರಣಿ ನಕ್ಷತ್ರ ಇದ್ದು, ಇದನ್ನು ವೈಷ್ಣವ ಏಕಾದಶಿ ಎಂದೂ ಕರೆಯಲಾಗುತ್ತದೆ. ಅರಿಹರಪುರದಲ್ಲಿ ಸ್ವಯಂಪ್ರಕಾಶ ಸರಸ್ವತಿ ಸ್ವಾಮಿಗಳ ಕಾರ್ಯಕ್ರಮವೂ ಇದೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More